ಇತ್ತೀಚೆಗೆ ಕೊಂಡ ಹೊಸ lensನಿಂದ ತೆಗೆದ ಕೆಲವು ಪ್ರಾಯೋಗಿಕ ಚಿತ್ರಗಳು:
@ f/2.8
@ f/1.8
ಅಂದಹಾಗೇ ನಾ ಕೊಂಡ lens: Nikkor f/1.8 50mm
ಇದೇ ಲೆನ್ಸ್ ಬಳಸಿ ನಾ ತೆಗೆದ ಇನ್ನಷ್ಟು ಚಿತ್ರಗಳನ್ನು ಇಲ್ಲಿ ಕಾಣಬಹುದು: Nikkor f/1.8 50mm | Palachandra | flickr
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
Sunday, December 19, 2010
Saturday, December 18, 2010
ಹಸ್ತಾಕ್ಷರಿ ಜೇಡ
ನೀವು "Mask of Zorro" ಸಿನೇಮಾ ನೋಡಿದ್ದರೆ, ಅದ್ರಲ್ಲಿ ಹೀರೋ ತನ್ನ ಕೈವಾಡವಿದ್ದಲ್ಲೆಲ್ಲಾ "Z" ಎಂಬ ಚಿಹ್ನೆಯ ಕತ್ಯಾಕ್ಷರ (ಹಸ್ತದಿಂದ ಹಾಕುವ ಅಕ್ಷರ ಹಸ್ತಾಕ್ಷರ, ಹಾಗೆಯೇ ಕತ್ತಿಯಿಂದ ಹಾಕುವುದು ಕತ್ಯಾಕ್ಷರ) ಹಾಕುವುದನ್ನು ನೋಡಿರುತ್ತೀರಿ. ನಾವೂ ಕೂಡ ಯಾವುದಾದರೂ ಒಪ್ಪಂದ ಪತ್ರಕ್ಕೆ ಆಗಾಗ ಹಸ್ತಾಕ್ಷರ (ಸಹಿ) ಹಾಕಬೇಕಾಗಿ ಬರುತ್ತದೆ. ಈ ಹಸ್ತಾಕ್ಷರವೇ ನಮ್ಮ ಒಪ್ಪಂದಕ್ಕೆ ಸಾಕ್ಷಿ, ನಮ್ಮ ವ್ಯಕ್ತಿತ್ವಕ್ಕೆ ಗುರುತು.
ಇದೇ ರೀತಿ ಈ "ಹಸ್ತಾಕ್ಷರಿ ಜೇಡ (signature spider)" ತನ್ನ ಬಲೆಯಲ್ಲಿ ನಾಲ್ಕು ಕಡೆ zig-zag ಹಸ್ತಾಕ್ಷರ ಹಾಕುತ್ತದೆ. ಬಲೆಯ ಈ ತರದ ರಚನೆ ಒಂದು ರೀತಿ ಅಲಂಕಾರದಂತೆ(stabilimentum). ತಮ್ಮ identityಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇದು ಸಹಾಯಕ. ನೆಲಮಟ್ಟದಿಂದ ಒಂದು ಮೀಟರೊಳಗೆ ಇದು ಬಲೆ ನೇಯುವುದರಿಂದ, ಇತರ ದೊಡ್ಡ ಪ್ರಾಣಿಗಳು ಸುಳಿದಾಡುವಾಗ, ಅದು ಗುರುತಿಸಿ, ಬಲೆಯನ್ನು ಹಾದು ಹೋಗದಂತೆ ಮಾಡಲು ಈ ಅಲಂಕಾರ. ಈ ಅಲಂಕಾರವಿಲ್ಲದಿದ್ದರೆ ಬರೀ ಕಣ್ಣಿಗೆ ಸೂಕ್ಷವಾಗಿ ಗಮನಿಸಿದರಷ್ಟೇ ಇದರ ಬಲೆ ಕಾಣಿಸುವುದು.
ದೊಡ್ಡ ಪ್ರಾಣಿಗಳೇನೋ ಇದರ ಹಸ್ತಾಕ್ಷರ ನೋಡಿ, ಬಲೆಯ ಬಳಿ ಸುಳಿಯುವುದಿಲ್ಲ. ಅಂತೆಯೇ ಈ ಜೇಡದ ಆಹಾರವಾದ ಇತರ ಕೀಟಗಳೂ ಈ ಹಸ್ತಾಕ್ಷರ ನೋಡಿ ಅದರ ಬಳಿ ಸುಳಿಯದಿದ್ದರೆ ಅವಕ್ಕೆ ಉಪವಾಸವೇ ಸರಿ. ಆಗ ಈ ಬಲೆಯ ಅಲಂಕಾರ "ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ" ಎಂಬಂತೆಯೇ. ಅದಕ್ಕಾಗಿ ಈ ಜೇಡ ಅಷ್ಟಪಾದಿಯಾದರೂ, ಕಾಲನ್ನು ಜೋಡಿ ಜೋಡಿಯಾಗಿರಿಸಿಕೊಂಡು ಚತುಷ್ಪಾದಿಯಂತೆ, ತಾನು ಜೇಡ ಅಲ್ಲ ಎನ್ನುವ ನಿಲುವಿನಲ್ಲಿರುತ್ತದೆ. ಈ ರೀತಿ ತನ್ನ ಕಾಲನ್ನು ಜೋಡಿ ಜೋಡಿಯಾಗಿರಿಸಿ ತಾನು ನೇಯ್ದ ಬಲೆಯ ನಾಲ್ಕು ಹಸ್ತಾಕ್ಷರದಂತಹ ರಚನೆಯಮೇಲೆ ಇಡುವುದರಿಂದ ಇನ್ನೊಂದು ಉಪಯೋಗವೂ ಇದೆ. ಕಾಲನ್ನು ಜೋಡಿಸಿದಾಗ ಕಾಲಿನ ರೋಮಗಳು ಬೆಸದು, ಹಸ್ತಾಕ್ಷರದ ಬಿಳುಪಿನ ರಚನೆಯೊಂದಿಗೆ ಸೂರ್ಯನ ಬೆಳಕನ್ನು ಪ್ರತಿಫಲಿಸುವಂತಹ ಸಾಧನವಾಗುತ್ತದೆ. ಕೀಟಗಳು ತೀಕ್ಷ ಬೆಳಕು ಮತ್ತು ಗಾಢವಾದ ಅದರ ಮೈಬಣ್ಣದಿಂದ ಹೂವೆಂದು ತಿಳಿದು ಆಕರ್ಷಿತವಾಗುವುದರಿಂದ ಇದರ ಬಲೆಗೆ ಸುಲಭವಾಗಿ ಬೀಳುತ್ತವೆ.
ತನ್ನ ಹೆಚ್ಚಿನ ಇತರ ಜೇಡಗಳಂತೆಯೇ ಈ ಪ್ರಭೇದದಲ್ಲೂ ಹೆಣ್ಣು ಗಂಡಿಗಿಂತ ದೊಡ್ಡದು. ಅಲ್ಲದೇ ಜೊತೆಗೂಡಿದ ನಂತರ ಜೊತೆಗಾರನನ್ನು ಕೊಲ್ಲುವುದೂ ಉಂಟು. ಜೇಡದ ಜೀವನದಂತೆ ನಮ್ಮದೂ ಇದ್ದಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂನ್ಯಾಸಿಗಳಾಗುತ್ತಿದ್ದರೇನೋ! ಗಂಡು ಜೇಡ, ಹೆಣ್ಣು ಜೇಡದ ಬಲೆಯ ಬಳಿಯಲ್ಲೇ ಬಲೆ ನೇಯ್ದುಕೊಂಡಿರುತ್ತದೆ. ಹೆಣ್ಣು ಜೇಡ ಮುಂದೆ ಮೊಟ್ಟೆಯಿಡುವಾಗ ಈ ಬಲೆಯನ್ನು ಚೀಲದಂತೆ ಮಾಡಿ ಅದರಲ್ಲಿ ಮೊಟ್ಟೆಯನ್ನು ತುಂಬಿಸುತ್ತದೆ. ಈ ಚೀಲದಲ್ಲಿ ಸುಮಾರು ೪೦೦-೧೪೦೦ ಮೊಟ್ಟೆಗಳು ಹಿಡಿಯುತ್ತದೆ. ಮೊಟ್ಟೆಯಿಂದ ಹೊರಬಂದ ಪುಟ್ಟ ಜೇಡಗಳು ಒಂದಿನ್ನೊಂದನ್ನು ತಿಂದುಕೊಂಡಿದ್ದು, ಉಳಿದವು ಆ ಚೀಲ ಹರಿದು ಹೊರಬರುವ ಸಾಮರ್ಥ್ಯ ಹೊಂದಿದ ಮೇಲೆ ಸ್ವತಂತ್ರವಾಗಿ ಜೀವಿಸುತ್ತದೆ.
ಆಕರ: The Signature Spider | Scienceray
ಇದೇ ರೀತಿ ಈ "ಹಸ್ತಾಕ್ಷರಿ ಜೇಡ (signature spider)" ತನ್ನ ಬಲೆಯಲ್ಲಿ ನಾಲ್ಕು ಕಡೆ zig-zag ಹಸ್ತಾಕ್ಷರ ಹಾಕುತ್ತದೆ. ಬಲೆಯ ಈ ತರದ ರಚನೆ ಒಂದು ರೀತಿ ಅಲಂಕಾರದಂತೆ(stabilimentum). ತಮ್ಮ identityಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇದು ಸಹಾಯಕ. ನೆಲಮಟ್ಟದಿಂದ ಒಂದು ಮೀಟರೊಳಗೆ ಇದು ಬಲೆ ನೇಯುವುದರಿಂದ, ಇತರ ದೊಡ್ಡ ಪ್ರಾಣಿಗಳು ಸುಳಿದಾಡುವಾಗ, ಅದು ಗುರುತಿಸಿ, ಬಲೆಯನ್ನು ಹಾದು ಹೋಗದಂತೆ ಮಾಡಲು ಈ ಅಲಂಕಾರ. ಈ ಅಲಂಕಾರವಿಲ್ಲದಿದ್ದರೆ ಬರೀ ಕಣ್ಣಿಗೆ ಸೂಕ್ಷವಾಗಿ ಗಮನಿಸಿದರಷ್ಟೇ ಇದರ ಬಲೆ ಕಾಣಿಸುವುದು.
ದೊಡ್ಡ ಪ್ರಾಣಿಗಳೇನೋ ಇದರ ಹಸ್ತಾಕ್ಷರ ನೋಡಿ, ಬಲೆಯ ಬಳಿ ಸುಳಿಯುವುದಿಲ್ಲ. ಅಂತೆಯೇ ಈ ಜೇಡದ ಆಹಾರವಾದ ಇತರ ಕೀಟಗಳೂ ಈ ಹಸ್ತಾಕ್ಷರ ನೋಡಿ ಅದರ ಬಳಿ ಸುಳಿಯದಿದ್ದರೆ ಅವಕ್ಕೆ ಉಪವಾಸವೇ ಸರಿ. ಆಗ ಈ ಬಲೆಯ ಅಲಂಕಾರ "ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ" ಎಂಬಂತೆಯೇ. ಅದಕ್ಕಾಗಿ ಈ ಜೇಡ ಅಷ್ಟಪಾದಿಯಾದರೂ, ಕಾಲನ್ನು ಜೋಡಿ ಜೋಡಿಯಾಗಿರಿಸಿಕೊಂಡು ಚತುಷ್ಪಾದಿಯಂತೆ, ತಾನು ಜೇಡ ಅಲ್ಲ ಎನ್ನುವ ನಿಲುವಿನಲ್ಲಿರುತ್ತದೆ. ಈ ರೀತಿ ತನ್ನ ಕಾಲನ್ನು ಜೋಡಿ ಜೋಡಿಯಾಗಿರಿಸಿ ತಾನು ನೇಯ್ದ ಬಲೆಯ ನಾಲ್ಕು ಹಸ್ತಾಕ್ಷರದಂತಹ ರಚನೆಯಮೇಲೆ ಇಡುವುದರಿಂದ ಇನ್ನೊಂದು ಉಪಯೋಗವೂ ಇದೆ. ಕಾಲನ್ನು ಜೋಡಿಸಿದಾಗ ಕಾಲಿನ ರೋಮಗಳು ಬೆಸದು, ಹಸ್ತಾಕ್ಷರದ ಬಿಳುಪಿನ ರಚನೆಯೊಂದಿಗೆ ಸೂರ್ಯನ ಬೆಳಕನ್ನು ಪ್ರತಿಫಲಿಸುವಂತಹ ಸಾಧನವಾಗುತ್ತದೆ. ಕೀಟಗಳು ತೀಕ್ಷ ಬೆಳಕು ಮತ್ತು ಗಾಢವಾದ ಅದರ ಮೈಬಣ್ಣದಿಂದ ಹೂವೆಂದು ತಿಳಿದು ಆಕರ್ಷಿತವಾಗುವುದರಿಂದ ಇದರ ಬಲೆಗೆ ಸುಲಭವಾಗಿ ಬೀಳುತ್ತವೆ.
ತನ್ನ ಹೆಚ್ಚಿನ ಇತರ ಜೇಡಗಳಂತೆಯೇ ಈ ಪ್ರಭೇದದಲ್ಲೂ ಹೆಣ್ಣು ಗಂಡಿಗಿಂತ ದೊಡ್ಡದು. ಅಲ್ಲದೇ ಜೊತೆಗೂಡಿದ ನಂತರ ಜೊತೆಗಾರನನ್ನು ಕೊಲ್ಲುವುದೂ ಉಂಟು. ಜೇಡದ ಜೀವನದಂತೆ ನಮ್ಮದೂ ಇದ್ದಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂನ್ಯಾಸಿಗಳಾಗುತ್ತಿದ್ದರೇನೋ! ಗಂಡು ಜೇಡ, ಹೆಣ್ಣು ಜೇಡದ ಬಲೆಯ ಬಳಿಯಲ್ಲೇ ಬಲೆ ನೇಯ್ದುಕೊಂಡಿರುತ್ತದೆ. ಹೆಣ್ಣು ಜೇಡ ಮುಂದೆ ಮೊಟ್ಟೆಯಿಡುವಾಗ ಈ ಬಲೆಯನ್ನು ಚೀಲದಂತೆ ಮಾಡಿ ಅದರಲ್ಲಿ ಮೊಟ್ಟೆಯನ್ನು ತುಂಬಿಸುತ್ತದೆ. ಈ ಚೀಲದಲ್ಲಿ ಸುಮಾರು ೪೦೦-೧೪೦೦ ಮೊಟ್ಟೆಗಳು ಹಿಡಿಯುತ್ತದೆ. ಮೊಟ್ಟೆಯಿಂದ ಹೊರಬಂದ ಪುಟ್ಟ ಜೇಡಗಳು ಒಂದಿನ್ನೊಂದನ್ನು ತಿಂದುಕೊಂಡಿದ್ದು, ಉಳಿದವು ಆ ಚೀಲ ಹರಿದು ಹೊರಬರುವ ಸಾಮರ್ಥ್ಯ ಹೊಂದಿದ ಮೇಲೆ ಸ್ವತಂತ್ರವಾಗಿ ಜೀವಿಸುತ್ತದೆ.
ಆಕರ: The Signature Spider | Scienceray
Friday, December 17, 2010
Thursday, December 16, 2010
ಬಣ್ಣದ ರೆಕ್ಕೆ
Common Picture Wing (Rhyothemis variegata)
ಮೇಲ್ನೋಟಕ್ಕೆ ಬಣ್ಣದಿಂದ, ಹಾರಾಟದ ಭಂಗಿಯಿಂದ ಚಿಟ್ಟೆಯಂತೆ ಕಾಣಿಸಿದರೂ ಇದು ಏರೋಪ್ಲೇನ್ ಚಿಟ್ಟೆ (DragonFly)ಯ ಕೀಟವರ್ಗಕ್ಕೆ ಸೇರುತ್ತದೆ. ಹಾರಾಟ ಏರೋಪ್ಲೇನ್ ಚಿಟ್ಟೆಯಂತೆ ವೇಗವಲ್ಲದ ಚಿಟ್ಟೆಯಂತೆ ನಿಧಾನವಾದದ್ದು. ಕೆಳಗಿನ ಚಿತ್ರ ಹೆಣ್ಣು ಏರೋಪ್ಲೇನ್ ಚಿಟ್ಟೆಯದ್ದು. ಗಂಡಿನ ರೆಕ್ಕೆಯಲ್ಲಿ ಕಡಿಮೆ ಕಪ್ಪು ಬಣ್ಣವಿರುವುದರಿಂದ ಲಿಂಗಭೇದವನ್ನು ಸುಲಭದಲ್ಲಿ ಗುರುತಿಸಬಹುದು.
ಮೇಲ್ನೋಟಕ್ಕೆ ಬಣ್ಣದಿಂದ, ಹಾರಾಟದ ಭಂಗಿಯಿಂದ ಚಿಟ್ಟೆಯಂತೆ ಕಾಣಿಸಿದರೂ ಇದು ಏರೋಪ್ಲೇನ್ ಚಿಟ್ಟೆ (DragonFly)ಯ ಕೀಟವರ್ಗಕ್ಕೆ ಸೇರುತ್ತದೆ. ಹಾರಾಟ ಏರೋಪ್ಲೇನ್ ಚಿಟ್ಟೆಯಂತೆ ವೇಗವಲ್ಲದ ಚಿಟ್ಟೆಯಂತೆ ನಿಧಾನವಾದದ್ದು. ಕೆಳಗಿನ ಚಿತ್ರ ಹೆಣ್ಣು ಏರೋಪ್ಲೇನ್ ಚಿಟ್ಟೆಯದ್ದು. ಗಂಡಿನ ರೆಕ್ಕೆಯಲ್ಲಿ ಕಡಿಮೆ ಕಪ್ಪು ಬಣ್ಣವಿರುವುದರಿಂದ ಲಿಂಗಭೇದವನ್ನು ಸುಲಭದಲ್ಲಿ ಗುರುತಿಸಬಹುದು.
Wednesday, December 15, 2010
Tuesday, December 14, 2010
Wednesday, December 08, 2010
Thursday, December 02, 2010
Tuesday, November 30, 2010
Monday, November 29, 2010
Wednesday, November 24, 2010
ಕೆಸುವಿನ ಎಲೆಯರಳಿದಾಗ
ಕೆಸುವಿನ ಎಲೆಯ ಗೊಜ್ಜು, ಪತ್ರೊಡೆ ಮಾಡಿ ಬಾಯಿ ಚಪ್ಪರಿಸಿದ್ದೇವೆ. ಉದ್ಯಾನವನದಲ್ಲೋ, ಮನೆಯಂಗಳದ ಬಣ್ಣ ಬಣ್ಣದ ಕೆಸುವಿನೆಲೆ ನೋಡಿ ಕಾಣಲು ಚೆಂದವಿದ್ದರೂ ತಿನ್ನಲು ಬರುವುದಿಲ್ಲವಲ್ಲ ಎಂದು ಮರುಗಿದ್ದೇವೆ. ಆದರೆ ತಿನ್ನುವ ಬದಲು ಬೇರೆ ಯಾವುದಕ್ಕೆ ಉಪಯೋಗಕ್ಕೆ ಬರಬಹುದು ಎಂದು ಯೋಚಿಸಿದವರು ಕೆಲವರಷ್ಟೇ.
ಇಂತಹ ಒಂದು ಉಪಯೋಗವನ್ನು ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಇತ್ತೀಚೆಗೆ ಮೂಡಿಗೆರೆ ತಾಲೂಕಿನ ದೇವವೃಂದದಲ್ಲಿ ನಡೆದ ತನ್ನ ೧೦ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪುಸ್ತಕ ಬಿಡುಗಡೆಗೆ ಬಳಸಿಕೊಂಡಿತು. ಚಿಪ್ಪಿನೊಳಗೆ ಬಚ್ಚಿಟ್ಟುಕೊಂಡ ಮುತ್ತಿನ ರೀತಿಯಲ್ಲಿ, ಕೆಸುವಿನ ಎರಡು ಎಲೆಯ ಮಧ್ಯೆ ಪುಸ್ತಕವನ್ನು ಬಿಡುಗಡೆಗೂ ಮೊದಲು ಇಡಲಾಗಿತ್ತು. ವೇದಿಕೆಯ ಮೇಲಿದ್ದ ಗಣ್ಯರು ಎಲೆಯೊಳಗೆ ಹುದುಗಿದ್ದ ಪುಸ್ತಕವನ್ನು ಹೊರತೆಗೆಯುವುದರ ಮೂಲಕ ಅನಾವರಣಗೊಳಿಸಿದರು. ಮಲ್ಲಿಕಾರ್ಜುನ ಹೊಸಪಾಳ್ಯರ 'ಚೌಳು ನೆಲದ ಬಂಗಾರ: ಮರೆಯಾಗುತ್ತಿರುವ ಬರದ ನಾಡಿನ ಭತ್ತವೈವಿಧ್ಯ' ಹಾಗೂ ಅನುಸೂಯ ಶರ್ಮಾರ 'ಹಿತ್ತಿಲು-ಕೈತೋಟಕ್ಕೊಂದು ಕೈಪಿಡಿ'ಬಿಡುಗಡೆಗೊಂಡ ಕೃತಿಗಳು.
ಪುಕ್ಕಟೆಯಾಗಿ ಮನೆಯ ಹಿತ್ತಲಿನಲ್ಲಿ ಸಿಗುವ, ಉಪಯೋಗದ ನಂತರ ಪರಿಸರದಲ್ಲಿ ಸುಲಭವಾಗಿ ಬೆರೆಯುವ ಕೆಸುವಿನೆಲೆಯ ಉಪಯೋಗದ ಈ ಹೊಸ ಕಲ್ಪನೆ ಮುಂದಿನ ಪ್ರಯತ್ನಗಳಿಗೆ ಸ್ಫೂರ್ತಿಯಾಗಬಲ್ಲದು.
ಇಂತಹ ಒಂದು ಉಪಯೋಗವನ್ನು ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಇತ್ತೀಚೆಗೆ ಮೂಡಿಗೆರೆ ತಾಲೂಕಿನ ದೇವವೃಂದದಲ್ಲಿ ನಡೆದ ತನ್ನ ೧೦ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪುಸ್ತಕ ಬಿಡುಗಡೆಗೆ ಬಳಸಿಕೊಂಡಿತು. ಚಿಪ್ಪಿನೊಳಗೆ ಬಚ್ಚಿಟ್ಟುಕೊಂಡ ಮುತ್ತಿನ ರೀತಿಯಲ್ಲಿ, ಕೆಸುವಿನ ಎರಡು ಎಲೆಯ ಮಧ್ಯೆ ಪುಸ್ತಕವನ್ನು ಬಿಡುಗಡೆಗೂ ಮೊದಲು ಇಡಲಾಗಿತ್ತು. ವೇದಿಕೆಯ ಮೇಲಿದ್ದ ಗಣ್ಯರು ಎಲೆಯೊಳಗೆ ಹುದುಗಿದ್ದ ಪುಸ್ತಕವನ್ನು ಹೊರತೆಗೆಯುವುದರ ಮೂಲಕ ಅನಾವರಣಗೊಳಿಸಿದರು. ಮಲ್ಲಿಕಾರ್ಜುನ ಹೊಸಪಾಳ್ಯರ 'ಚೌಳು ನೆಲದ ಬಂಗಾರ: ಮರೆಯಾಗುತ್ತಿರುವ ಬರದ ನಾಡಿನ ಭತ್ತವೈವಿಧ್ಯ' ಹಾಗೂ ಅನುಸೂಯ ಶರ್ಮಾರ 'ಹಿತ್ತಿಲು-ಕೈತೋಟಕ್ಕೊಂದು ಕೈಪಿಡಿ'ಬಿಡುಗಡೆಗೊಂಡ ಕೃತಿಗಳು.
ಪುಕ್ಕಟೆಯಾಗಿ ಮನೆಯ ಹಿತ್ತಲಿನಲ್ಲಿ ಸಿಗುವ, ಉಪಯೋಗದ ನಂತರ ಪರಿಸರದಲ್ಲಿ ಸುಲಭವಾಗಿ ಬೆರೆಯುವ ಕೆಸುವಿನೆಲೆಯ ಉಪಯೋಗದ ಈ ಹೊಸ ಕಲ್ಪನೆ ಮುಂದಿನ ಪ್ರಯತ್ನಗಳಿಗೆ ಸ್ಫೂರ್ತಿಯಾಗಬಲ್ಲದು.
Wednesday, November 17, 2010
ಹತ್ತಿಗ
ಹತ್ತಿಗ -
ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು
companion ನಾಮಪದ
ಕೇಳ (ಕೆಳದಿ; ಕೆಳೆಯ), ಒಡನಾಡಿ (ಒಡನಾಟ; ಒಡನಾಡು), ಹತ್ತಿಗ, ತಹಿಕಾರ
Friday, November 12, 2010
ಸಾಂಬ್ರಾಣಿ ಗಡ್ಡೆ
ಮಳೆಗಾಲದಲ್ಲಿ ಸಿಗುವ ಅಪರೂಪದ ಗಡ್ಡೆ. ಚಿಕ್ಕದಾದ್ದರಿಂದ ಸಿಪ್ಪೆ ತೆಗೆಯುವುದು ಸ್ವಲ್ಪ ತ್ರಾಸವೇ. ಇದರಿಂದ ಮಾಡಿದ ಪಲ್ಯ, ಹುಳಿ ಮಾತ್ರ ಸೊಗಸಾಗಿರುತ್ತದೆ. ನೀವು ಈ ಗಡ್ಡೆ ಬಳಸಿದ್ದೀರ, ಏನೇನು ಅಡುಗೆ ಮಾಡ್ತೀರಿ ಮತ್ತಿದಕ್ಕೆ ಏನಂತೀರಿ...
Thursday, November 11, 2010
Tuesday, November 09, 2010
Monday, November 08, 2010
Wednesday, October 20, 2010
Tuesday, October 19, 2010
Monday, October 18, 2010
Monday, September 27, 2010
Wire-tailed_Swallow
ಈ ಹಕ್ಕಿಯ ಹೆಸರು ಕನ್ನಡದಲ್ಲಿ ಏನು?
ತಂತಿ ಬಾಲದ ಕವಲುತೋಕೆ (ಉತ್ತರ ನೀಡಿದವರು: ಪವಿತ್ರ)
ಈ ಹಕ್ಕಿಯ ಬಗ್ಗೆ ಹೆಚ್ಚಿನ ಮಾಹಿತಿ: ತಂತಿ ಬಾಲದ ಅಂಬರ ಗುಬ್ಬಿಗಳದ್ದು ಮಣ್ಣಿನ ಉಂಡೆಗಳ ಮುತ್ತಿನ ಮನೆ!
ತಂತಿ ಬಾಲದ ಕವಲುತೋಕೆ (ಉತ್ತರ ನೀಡಿದವರು: ಪವಿತ್ರ)
ಈ ಹಕ್ಕಿಯ ಬಗ್ಗೆ ಹೆಚ್ಚಿನ ಮಾಹಿತಿ: ತಂತಿ ಬಾಲದ ಅಂಬರ ಗುಬ್ಬಿಗಳದ್ದು ಮಣ್ಣಿನ ಉಂಡೆಗಳ ಮುತ್ತಿನ ಮನೆ!
Friday, September 24, 2010
Tuesday, September 14, 2010
Tuesday, August 31, 2010
ಮೀನು ಹಿಡಿಯಲು ಕಲಿಸಿ, ಮೀನು ಹಿಡಿದುಕೊಡಬೇಡಿ
ಹಬ್ಬ ಹರಿದಿನಗಳಲ್ಲಿ ದೇವತೆಗಳ ವೇಷ ಧರಿಸಿ ಮನೆ ಮನೆ ತಿರುಗಿ ಭಿಕ್ಷೆ ಬೇಡುವ ಜನವರ್ಗವುಂಟು. ಅದೂ ಅಲ್ಲದೇ ಪುಣ್ಯ ಕ್ಷೇತ್ರಗಳಂತಹ ಸ್ಥಳಗಳಲ್ಲಿ ವರ್ಷದುದ್ದಕ್ಕೂ ವೇಷ ಧರಿಸಿದ ಅಥವಾ ಧರಿಸದ ಭಿಕ್ಷುಕರೂ ಕಾಣಿಸಿಕೊಳ್ಳುವುದುಂಟು. ಕೈಲಾಗದವರು, ವಯಸ್ಸಾದವರು ಮಾತ್ರವಲ್ಲದೇ ಚಿಕ್ಕ ಮಕ್ಕಳೂ ಭಿಕ್ಷೆಗೆ ಕೈಯೊಡ್ಡುವುದುಂಟು. ಇಂತವರ ಕಾಟ ತಾಳಲಾರದೇ ಪುಣ್ಯ ಕ್ಷೇತ್ರಗಳ ಬಗ್ಗೆ ಜಿಗುಪ್ಸೆ ಮೂಡುವುದು ಸಹಜ. ಆದರೆ ಇತ್ತೀಚೆಗೆ ಇವು ಕೇವಲ ಪುಣ್ಯ ಕ್ಷೇತ್ರಗಳಷ್ಟೇ ಅಲ್ಲದೇ ಬೆಂಗಳೂರಿನ ಸಮೀಪದ ಹಳ್ಳಿಗಳಲ್ಲೂ ಪಸರಿಸಿರುವುದು ವಿಪರ್ಯಾಸ!
ತಿಂಗಳ ಹಿಂದಷ್ಟೇ ಭೇಟಿ ನೀಡಿದ ಸ್ಕಂಧಗಿರಿ ಒಂದು ಬಗೆಯ ಉದಾಹರಣೆಯಾದರೆ ವಾರದ ಹಿಂದೆ ಭೇಟಿ ನೀಡಿದ ಪಾಂಡವಪುರ ಇನ್ನೊಂದು ಬಗೆಯದು. ವಾರಾಂತ್ಯಗಳಲ್ಲಿ ಬಿಡುವು ಮಾಡಿಕೊಂಡು ಸ್ಕಂಧಗಿರಿಯಂತಹ ತಾಣಕ್ಕೆ ಹೋದರೆ ಸ್ವಯಂಘೋಷಿತ ಗೈಡುಗಳ ಕಾಟ. ಮೊದಲು "ಸಾರ್ ದಾರಿ ನಿಮಗೆ ಗೊತ್ತಾಗೋದಿಲ್ಲ, ಮಧ್ಯದಲ್ಲಿ ಅಪಾಯಕರ ಪ್ರಾಣಿಗಳು ಎದುರಾಗಬಹುದು", ಇತ್ಯಾದಿ ಬೆದರಿಕೆಯೊಡ್ಡಿ ಗೈಡಿನ ಅನಿವಾರ್ಯತೆ ಸೂಚಿಸುತ್ತಾರೆ. ಇದಕ್ಕೆ ನೀವು ಮಣೆ ಹಾಕದಿದ್ದರೆ, ಗುಂಪು ಕಟ್ಟಿಕೊಂಡು ಬಂದು "ಇಲ್ಲಿ ಕಳ್ಳಕಾಕರು ಜಾಸ್ತಿ, ದಾರೀಲಿ ನಿಮಗೇನಾದರೂ ಅಪಾಯವಾಗಬಹುದು; ನಿಮ್ಮ ವಾಹನ ಇಲ್ಲೇ ಬಿಟ್ಟಿದ್ದೀರ, ಅದಕ್ಕೆ ನಾವು ಜವಾಬ್ದಾರರಲ್ಲ;" ಇತ್ಯಾದಿಯಾಗಿ ಬೆದರಿಸುವುದರ ಮೂಲಕವಾದರೂ ಒಂದು ಬೆಲೆಯನ್ನು ನಿಶ್ಚಯಿಸಿ ನಿಮ್ಮೊಂದಿಗೆ ಬರುತ್ತಾರೆ. ಇನ್ನು ಕೊಕ್ಕರೆ ಬೆಳ್ಳೂರು ಅಥವಾ ತೊಣ್ಣೂರು ಕೆರೆಗೋ ಭೇಟಿಯಿತ್ತರೆ ಬೇರೆಯ ಬಗೆಯ ವಸೂಲಿ. "ಅಣ್ಣ ಅಣ್ಣ, ನನ್ನ ಹತ್ರ ಪೆನ್ನಿಲ್ಲ/ಪುಸ್ತಕವಿಲ್ಲ. ತಗೋಳೋಕೆ ದುಡ್ಡು ಕೊಡಿ. ನಂಬಿಕೆ ಇಲ್ಲದಿದ್ರೆ ಇಲ್ಲೇ ಹತ್ತಿರದಲ್ಲಿ ಅಂಗಡಿ ಇದೆ ಕೊಡ್ಸಿ ಅಣ್ಣ " ಅಂತ ಬೇಡೋ ಮಕ್ಕಳು. ಮೊದಲನೆಯದು ಒಂದು ರೀತಿಯಲ್ಲಿ ಹಿಂದಿನಿಂದ ಇದ್ದಿದ್ದೇ. ಆದರೆ ಎರಡನೆಯದು ಮಾತ್ರ ಭಿಕ್ಷೆ ಬೇಡುವ ಹೊಸ ಪರಿ. ನನಗೆ ಆಶ್ಚರ್ಯವಾಗಿದ್ದು ಇವರು ದುಡ್ಡು ಬಿಟ್ಟು ಪುಸ್ತಕ ಪೆನ್ನನ್ನು ಕೇಳಲು ತೊಡಗಿದ್ದು ಹೇಗೆ ಎಂದು.
"community service" ಇತ್ತೀಚಿನ ದಿನಗಳಲ್ಲಿ ತಲೆಯೆತ್ತುತಿರುವ ಹೊಸ ಬಗೆಯ ಹವ್ಯಾಸ. ಜನರ ಸೇವೆಯ ಹೆಸರಿನಲ್ಲಿ ಉಳ್ಳವರಿಂದ ಹಣ ಸಂಗ್ರಹಿಸಿ, ಬಡವರನ್ನು ಹುಡುಕಿ ಅವರಿಗೆ ಸಹಾಯ ಮಾಡುವಂತದ್ದು. ಇಂತವರು ಹೆಚ್ಚಾಗಿ ಸಹಾಯ ಮಾಡುವುದು ಶಾಲಾ ವಿದ್ಯಾರ್ಥಿಗಳಿಗೆ; ಪುಸ್ತಕ, ಪೆನ್ನು, ಪೆನ್ಸಿಲ್ ಬಟ್ಟೆ ಇತ್ಯಾದಿ ಹಂಚುವುದು. ಪಟ್ಟಣದಿಂದ ಆಗಾಗ್ಗೆ ಇಂಥವರು ಬಂದು ಪುಕ್ಕಟೆಯಾಗಿ ಪುಸ್ತಕ, ಪೆನ್ಸಿಲ್, ಪೆನ್ನು ಕೊಟ್ಟುಹೋಗುವುದನ್ನು ಕಂಡ ಮಕ್ಕಳು, ಅವರ ಹೆತ್ತವರು ಹಿಂದಿನ ರೀತಿ ಭಿಕ್ಷೆ ಬೇಡುವುದಕ್ಕಿಂತ ಪುಸ್ತಕ ಪೆನ್ನಿಗಾಗಿ ಕೇಳಿದರೆ ಜನರು ಹಣ ಕೊಡುತ್ತಾರೆ ಎಂಬುದನ್ನು ಮನಗಂಡರೇನೋ. ಕೊಕ್ಕರೆ ಬೆಳ್ಳೂರಿನಂತಹ ಹಳ್ಳಿಗೆ ವಾರಾಂತ್ಯದಲ್ಲಿ ಕನಿಷ್ಟಪಕ್ಷ ೧೦-೧೫ ಜನ ಭೇಟಿ ಕೊಟ್ಟರೂ ಪ್ರತಿಯೊಂದು ಮಕ್ಕಳಿಗೆ ೭ ದಿನಗಳಲ್ಲಿ ಅಷ್ಟೊಂದು ಪೆನ್ನು, ಪುಸ್ತಕಗಳ ಅವಶ್ಯಕತೆಯಾದರೂ ಏನುಂಟು? "community service"ನ ಹೆಸರಲ್ಲೋ, ನಾವೇ ಖುದ್ದಾಗಿ ಮಕ್ಕಳಿಗೆ ಪುಸ್ತಕ ಕೊಡಿಸಿದರೂ ಅವುಗಳನ್ನು ಮತ್ತೆ ಅಂಗಡಿಗೆ ಮಾರುವುದಿಲ್ಲ ಎಂದು ಹೇಗೆ ತಿಳಿಯುವುದು?
"community service"ನಲ್ಲಿ ತೊಡಗಿಸಿಕೊಂಡವರ ಉದ್ದೇಶ ಒಳ್ಳೆಯದಿರಬಹುದು. ಆದರೂ ಸಮಸ್ಯೆಯ ಮೂಲ ತಿಳಿಯದೆಯೆ ತಾತ್ಕಾಲಿಕ ಪರಿಹಾರ ಕೊಡಲು ಹೋದರೆ ಮೀನು ಕೊಟ್ಟಂತಾಗುತ್ತದೆ; ನಾಳೆ ಮೀನಿಗಾಗಿ ಮತ್ತೆ ಕೈ ಒಡ್ಡುವಂತಾಗುತ್ತದೆ. ಅದರ ಬದಲು ಸಮಸ್ಯೆಯ ಮೂಲದತ್ತ ಚಿಂತಿಸಿದರೆ ಒಳಿತಲ್ಲವೇ?
ಕಳೆದ ವಾರಾಂತ್ಯ ಇಂತಹ ಹಲವು ಮಕ್ಕಳನ್ನು ನೋಡಿ ನೋಡಿ ಬೇಸತ್ತು (ಯಾರಿಗೂ ಏನೂ ಕೊಡಲಿಲ್ಲ), ಕೊನೆಯಲ್ಲಿ ಬಂದವನ ಬಳಿ, ಅವನು ಮಾತನಾಡುವ ಮೊದಲೇ, "ತಮ್ಮಾ, ಪುಸ್ತಕ ಕೊಡ್ಸು" ಅಂತ ಕೇಳಿದೆ. ನನ್ನನ್ನೊಮ್ಮೆ ನೋಡಿ ಏನೂ ಹೇಳದೆ ಹಿಂದಿರುಗಿದ. ಜೊತೆಯಲ್ಲಿದ್ದ ರವಿ, "ಮುಂದಿನ ಬಾರಿ lap top ಕೊಡ್ಸೋಕೆ ಕೇಳ್ಕೊಳಿ" ಅಂದ್ರು.
Monday, August 30, 2010
Friday, August 27, 2010
ಕವಿ ಶೈಲ
ಮನೇ ಮನೇ ಮುದ್ದು ಮನೇ
ಮನೇ ಮನೇ ನನ್ನ ಮನೇ
--
ಕುವೆಂಪು
ಕವಿ ಮನೆ
ಮಿತ್ರರಿಗೆ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ
ಮೌನವ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ
ಕವಿಶೈಲದಲಿ, ಮುತ್ತಿಬಹ ಸಂಜೆಗತ್ತಲಲಿ
--
ಕುವೆಂಪು
ಕವಿ ಸಮಾಧಿ
ಓ ಕವಿಶೈಲ, ನಿನ್ನ
ಸಂಪದವನೆನಿತು ಬಣ್ಣಿಸಲಳವು ಕವನದಲಿ?
ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯ ವೈವಿಧ್ಯಮಂ ರಚಿಸಿ ನೀಂ ಭುವನದಲಿ
ಸ್ವರ್ಗವಾಗಿಹೆ ನನಗೆ
--
ಕುವೆಂಪು
ಟಿ.ಎಸ್.ವೆಂ., ಬಿ.ಎಂ.ಶ್ರೀ., ಕು.ವೆಂ.ಪು., ಪೂ.ಚಂ.ತೇ. ಹಸ್ತಾಕ್ಷರ
ಮನೇ ಮನೇ ನನ್ನ ಮನೇ
--
ಕುವೆಂಪು
ಕವಿ ಮನೆ
ಮಿತ್ರರಿಗೆ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ
ಮೌನವ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ
ಕವಿಶೈಲದಲಿ, ಮುತ್ತಿಬಹ ಸಂಜೆಗತ್ತಲಲಿ
--
ಕುವೆಂಪು
ಕವಿ ಸಮಾಧಿ
ಓ ಕವಿಶೈಲ, ನಿನ್ನ
ಸಂಪದವನೆನಿತು ಬಣ್ಣಿಸಲಳವು ಕವನದಲಿ?
ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯ ವೈವಿಧ್ಯಮಂ ರಚಿಸಿ ನೀಂ ಭುವನದಲಿ
ಸ್ವರ್ಗವಾಗಿಹೆ ನನಗೆ
--
ಕುವೆಂಪು
ಟಿ.ಎಸ್.ವೆಂ., ಬಿ.ಎಂ.ಶ್ರೀ., ಕು.ವೆಂ.ಪು., ಪೂ.ಚಂ.ತೇ. ಹಸ್ತಾಕ್ಷರ
Wednesday, August 25, 2010
Tuesday, August 24, 2010
ಕೆಳದಿಯ ರಾಮೇಶ್ವರ ದೇವಾಲಯ
ಯಾದವ/ಮುರಾರಿ (ಕೆಳದಿಯ ರಾಜ್ಯ ಸ್ಥಾಪನೆಯ ಉದ್ದೇಶಕ್ಕಾಗಿ ತಮ್ಮೊಡೆಯನಿಗೆ ಸಿಕ್ಕಿದ ನಿಧಿಯನ್ನು ವಶಕ್ಕೆ ತೆಗೆದುಕೊಳ್ಳಲು ಸ್ವ-ಇಚ್ಛೆಯಿಂದ ಬಲಿಯಾದವರು)
ಗರ್ಭಗುಡಿಯ ಮೇಲ್ಛಾವಣಿಯಲ್ಲಿನ ಗಂಢಭೇರುಂಡ ಎಂಬ ಕಾಲ್ಪನಿಕ ಪಕ್ಷಿಯ ಉಬ್ಬು ಕೆತ್ತನೆ
ಸ್ಥೂಪದಲ್ಲಿ ಕೆತ್ತಿದ ಸುಂದರ ಗಣೇಶನ ಕೆತ್ತನೆ
ಗರ್ಭಗುಡಿಯ ಒಂದು ನೋಟ
ರಾಜ ಮತ್ತಾತನ ಪರಿವಾರ
ಅಭಿಷೇಕದ ತೀರ್ಥ ಸಂಗ್ರಹವಾಗುವ ಸ್ಥಳ (ಇದಕ್ಕೆ ಏನಂತಾರೆ ತಿಳಿದಿಲ್ಲ-ತಿಳಿದವರು ತಿಳಿಸಿದರೆ ಆಭಾರಿ)
ಶಿವನ ವಿಶಿಷ್ಟ ಆರಾಧಕ ಭೃಂಗಿ (ಪಾರ್ವತಿಯಿಂದ ಶಾಪಕ್ಕೊಳಗಾಗಿ ದೇಹದ ರಕ್ತ ಮಾಂಸಾದಿಗಳನ್ನು ಕಳೆದುಕೊಂಡು ದುರ್ಭಲನಾದಾಗ, ಶಿವ ಮೂರನೇ ಕಾಲನ್ನು ಕರುಣಿಸುತ್ತಾನೆ.)
ಇನ್ನಷ್ಟು ಚಿತ್ರಗಳಿಗೆ ಈ ಕೆಳಗಿನ ಆಲ್ಬಮ್ಮಿಗೆ ಭೇಟಿ ಕೊಡಿ:
http://www.flickr.com/photos/palachandra/sets/72157624577769179/
ಗರ್ಭಗುಡಿಯ ಮೇಲ್ಛಾವಣಿಯಲ್ಲಿನ ಗಂಢಭೇರುಂಡ ಎಂಬ ಕಾಲ್ಪನಿಕ ಪಕ್ಷಿಯ ಉಬ್ಬು ಕೆತ್ತನೆ
ಸ್ಥೂಪದಲ್ಲಿ ಕೆತ್ತಿದ ಸುಂದರ ಗಣೇಶನ ಕೆತ್ತನೆ
ಗರ್ಭಗುಡಿಯ ಒಂದು ನೋಟ
ರಾಜ ಮತ್ತಾತನ ಪರಿವಾರ
ಅಭಿಷೇಕದ ತೀರ್ಥ ಸಂಗ್ರಹವಾಗುವ ಸ್ಥಳ (ಇದಕ್ಕೆ ಏನಂತಾರೆ ತಿಳಿದಿಲ್ಲ-ತಿಳಿದವರು ತಿಳಿಸಿದರೆ ಆಭಾರಿ)
ಶಿವನ ವಿಶಿಷ್ಟ ಆರಾಧಕ ಭೃಂಗಿ (ಪಾರ್ವತಿಯಿಂದ ಶಾಪಕ್ಕೊಳಗಾಗಿ ದೇಹದ ರಕ್ತ ಮಾಂಸಾದಿಗಳನ್ನು ಕಳೆದುಕೊಂಡು ದುರ್ಭಲನಾದಾಗ, ಶಿವ ಮೂರನೇ ಕಾಲನ್ನು ಕರುಣಿಸುತ್ತಾನೆ.)
ಇನ್ನಷ್ಟು ಚಿತ್ರಗಳಿಗೆ ಈ ಕೆಳಗಿನ ಆಲ್ಬಮ್ಮಿಗೆ ಭೇಟಿ ಕೊಡಿ:
http://www.flickr.com/photos/palachandra/sets/72157624577769179/
Thursday, August 19, 2010
ಮೂರ್ಬಣ್ಣದ ಮುನಿಯ
ಬಿಳಿ ಅಥವಾ ಬೆಳ್ಳಿ ಬಣ್ಣದ ಕೊಕ್ಕು, ಕಡು ಕಪ್ಪು ತಲೆ, ಕುತ್ತಿಗೆಯಿಂದ ದೇಹದ ಕೆಳಭಾಗದವರೆಗೆ ಎರಡೂ ಕಡೆ ಹರಿಯುವ ಬಿಳಿಯ ಪಟ್ಟೆ, ಕಪ್ಪಾದ ಎದೆಯ ಭಾಗ, ಕಂದು ಬಣ್ಣದ ಮೇಲ್ಮೈ ಇರುವ ಈ ಹಕ್ಕಿ ಚಿಕ್ಕ ಪುಟ್ಟ ಹುಲ್ಲಿನ ನಡುವೆ ಗುಂಪು ಗುಂಪಾಗಿ ಕಾಣಿಸುತ್ತವೆ. ಹಾರಿದರೆ ಹೂವೊಂದು ಸುರುಳಿ ಸುರುಳಿಯಾಗಿ ಗಿರ್ಕಿ ಹೊಡೆಯುತ್ತಾ ಮೇಲೇರಿದ ಅನುಭವ. ಕೊಕ್ಕು ಗಿಳಿಯ ಕೊಕ್ಕಿನಂತೆ ಬಲಿಷ್ಟವಾಗಿದ್ದು ಇದರ ಆಹಾರವಾದ ಕಾಳು, ಧಾನ್ಯವನ್ನು ತಿನ್ನಲು ಅನುಕೂಲವಾಗಿದೆ. ಜವುಗು ಹುಲ್ಲುಗಾವಲಿನಲ್ಲಿ ಕಾಣಬರುವ ಈ ಹಕ್ಕಿ ಗಾತ್ರದಲ್ಲಿ ಗುಬ್ಬಿಗಿಂತಲೂ ಕೊಂಚ ಚಿಕ್ಕದು.
ಈ ಬಾರಿ ಕೋಟಕ್ಕೆ ಹೋದಾಗ ಸಮುದ್ರದ ಬಳಿಯ ಗದ್ದೆಯಂಚಿನಲ್ಲಿ ಕಾಣಿಸಿದ ಈ ಸುಂದರ ಹಕ್ಕಿಯ ಚಿತ್ರ ತೆಗೆಯಲು ಪ್ರಯತ್ನಿಸಿದೆ. ತುಂಬಾ ಪುಟ್ಟ ಹಕ್ಕಿಯಾದ್ದರಿಂದ ಕೆಳಗಿನದಕ್ಕಿಂತ ಸಮೀಪದಿಂದ ತೆಗೆಯಲಾಗಲಿಲ್ಲ.
ಈ ಬಾರಿ ಕೋಟಕ್ಕೆ ಹೋದಾಗ ಸಮುದ್ರದ ಬಳಿಯ ಗದ್ದೆಯಂಚಿನಲ್ಲಿ ಕಾಣಿಸಿದ ಈ ಸುಂದರ ಹಕ್ಕಿಯ ಚಿತ್ರ ತೆಗೆಯಲು ಪ್ರಯತ್ನಿಸಿದೆ. ತುಂಬಾ ಪುಟ್ಟ ಹಕ್ಕಿಯಾದ್ದರಿಂದ ಕೆಳಗಿನದಕ್ಕಿಂತ ಸಮೀಪದಿಂದ ತೆಗೆಯಲಾಗಲಿಲ್ಲ.
Thursday, August 12, 2010
ಮಳೆಗಾಲದ ಸೈಕಲ್ ಸವಾರಿ
ಕಳೆದ ವರ್ಷದ ಮಳೆಗಾಲ ಮುಗಿಯುತ್ತಾ ಬಂದ ಸಮಯ. ಹಾಸನದಲ್ಲಿ ನನ್ನ ಸ್ನೇಹಿತನೊಬ್ಬನ ಮದುವೆ ಮುಗಿಸಿ ಊರಿಗೆ ಹೊರಟಿದ್ದೆ. ಶಿರಾಡಿ ಘಾಟಿ, ಮಧ್ಯಾಹ್ನ ೩ರ ಸಮಯ, ಸುತ್ತ ಎಲ್ಲಾ ಕಡೆ ಮಂಜು ಮುಸುಕಿದ ವಾತಾವರಣ, ಸೋನೆ ಮಳೆ, ಸ್ವಚ್ಛ ಹವೆ, ತೋಯ್ದ ಮರಗಳು ಐಪಾಡ್ ಕಿವಿಯಲ್ಲಿ "ಎಲ್ಲೋ ಮಳೆಯಾಗಿದೆಯೆಂದು" ಹಾಡು ಕೇಳಿಸುತಿತ್ತು. ಊರಿನವರೆಗೂ ಟಿಕೇಟ್ ಕೊಂಡಿದ್ದರೂ, ಈಗಲೇ ಊರಿಗೆ ಯಾಕೆ ಹೋಗಬೇಕು ಎಂಬ ಪ್ರಶ್ನೆ ಎದ್ದಿತು. ತಡಮಾಡಲಿಲ್ಲ, ಎದ್ದು ಡ್ರೈವರ್ ಬಳಿ ಬಸ್ ನಿಲ್ಲಿಸಲು ಹೇಳಿ ಅಲ್ಲಿಯೇ ಇಳಿದುಕೊಂಡೆ. ಕೊಡೆಯಿಲ್ಲ, ರೈನು ಕೋಟಿಲ್ಲ, ಮಳೆಯಲ್ಲೇ ನೆನೆಯುತ್ತಾ ಘಾಟಿ ಇಳಿಯತೊಡಗಿದೆ. ಕತ್ತಲಾಗದೇ, ಹೊಟ್ಟೆಗೆ ಏನಾದರೂ ಸಿಕ್ಕಿದ್ದರೆ ಜೀವನದ ಕೊನೆಯವರೆಗೂ ಹಾಗೆಯೇ ನಡೆಯುತ್ತಿದೆನೇನೋ. ಹಾಗಾಗಲಿಲ್ಲ, ಸಿಕ್ಕ ಲಾರಿಯೊಂದನ್ನು ಹತ್ತಿಕೊಂಡು ಕುಕ್ಕೆ ಸುಬ್ರಮಣ್ಯ ತಲುಪಿದೆ. ಕುಮಾರಧಾರೆ ಸೇತುವೆ ಮೀರಿ ಹರಿಯುತ್ತಿತ್ತು, ಕರಾವಳಿಯ ಧಾರಾಕಾರ ಮಳೆ, ಮಲೆನಾಡ ಹಸಿರು. ದೇವಸ್ಥಾನಕ್ಕೂ ಹೋಗದೆ ರಥ ಬೀದಿ, ಹೊಳೆಯ ಬದಿ ಒಬ್ಬನೇ ತಿರುಗಾಡಿಕೊಂಡು, ರಾತ್ರಿ ರೂಮನ್ನು ಬಾಡಿಗೆಗೆ ಕೊಂಡು ಬೆಳೆಗೆದ್ದು ಮನೆಗೆ ಹೊರಟೆ..
ಮೊನ್ನೆ ಮಲೆನಾಡ ಪ್ರವಾಸ ಕೈಗೊಂಡಾಗಲೂ ಇದೇ ಆಗಿದ್ದು. ಜೋಗ ನೋಡಿದ ನಂತರ ನಾವು ಹೋಗಬೇಕಾಗಿದ್ದುದು ಯಾವುದೋ ಮಠವನ್ನು ನೋಡಲು, ಸುಮಾರು ೨ ಗಂಟೆ ವಾಹನದಲ್ಲಿ ಕುಳಿತು ಪಯಣ. ಹಾಗೇ ಸಾಗುತ್ತಾ ಇದ್ದಾಗ ವಿಶಾಲವಾದ ಗದ್ದೆಬಯಲು ಎದುರಾಯಿತು. ಈಗಷ್ಟೆ ನೆಟ್ಟಿ ಮಾಡಿದ್ದು, ಹಚ್ಚ ಹಸುರು. ಕ್ಯಾಬ್ ನಿಲ್ಲಿಸಲು ಹೇಳಿ ಕೂಡಲೇ ಕೆಳಗಿಳಿದೆ. ರಾಜ ಮಾರ್ಗದ ಮಗ್ಗುಲಲ್ಲಿ ಕಿರಿದಾದ ರಸ್ತೆ, ಅಕ್ಕ ಪಕ್ಕದಲ್ಲಿ ಗದ್ದೆ, ಡೊಂಕಾದ ರಸ್ತೆಯ ದೂರದಲ್ಲಿ ಸೈಕಲ್ ಸವಾರ. ನಾನು ಫೋಟೋ ತೆಗೆಯುವುದರೊಳಗೆ ಆತ ಮುಂದೆ ಹೋಗಬಹುದೆಂದು ಓಡತೊಡಗಿದೆ. ಇನ್ನೇನು ಹತ್ತಿರ ಬಂದೆ, ಅಷ್ಟರಲ್ಲಿ ಆತ ಹೋಗಿಯಾಗಿತ್ತು. ಹಿಂದೆ ನೋಡಿದೆ, ಮಿತ್ರ ಅನಿಲ್ ಹಿಂಬಾಲಿಸುತ್ತಿದ್ದನು. ಅವನ ಮುಖ ನೋಡಿ, "ಹೋಗ್ಬೇಕಾ ಮಠಕ್ಕೆ?" ಕೇಳಿದೆ. ಆತನಿಗೂ ಸ್ಥಳ ಹಿಡಿಸಿದ್ದರಿಂದ ಹಳ್ಳಿಯ ದಾರಿ, ಗದ್ದೆಯ ಅಂಚಿನಲ್ಲಿ ನಡೆಯುತ್ತಾ, ರೈತರೊಂದಿಗೆ ಮಾತಿಗಿಳಿಯುತ್ತಾ, ನನಗೆ ಬೇಕಾದ ಚಿತ್ರ ತೆಗೆಯುತ್ತಾ ಸಂತೋಷವಾಗಿದ್ದೆ. ಉಳಿದವರು ತಮ್ಮ ಪ್ರಯಾಣ ಮುಂದುವರೆಸಿದರು. ಹಾಗೆಯೇ ಕೆಳಗಿನವು ನಾ ಸೆರೆಹಿಡಿದ ಸೈಕಲ್ ಚಿತ್ರಗಳು.
ಮಳೆಯಲ್ಲಿ ತೋಯ್ದ ಸೈಕಲ್
ಡಬ್ಬಲ್ ರೈಡಿನ ಮಜಾ
ಮೋಡವನ್ನು ಹಿಂಬಾಲಿಸಿ
ಪರಿಸರ ಸ್ನೇಹಿ ವಾಹನ
"If we admit that human life can be ruled by reason, then all possibility of life is destroyed."
— Leo Tolstoy
ಮೊನ್ನೆ ಮಲೆನಾಡ ಪ್ರವಾಸ ಕೈಗೊಂಡಾಗಲೂ ಇದೇ ಆಗಿದ್ದು. ಜೋಗ ನೋಡಿದ ನಂತರ ನಾವು ಹೋಗಬೇಕಾಗಿದ್ದುದು ಯಾವುದೋ ಮಠವನ್ನು ನೋಡಲು, ಸುಮಾರು ೨ ಗಂಟೆ ವಾಹನದಲ್ಲಿ ಕುಳಿತು ಪಯಣ. ಹಾಗೇ ಸಾಗುತ್ತಾ ಇದ್ದಾಗ ವಿಶಾಲವಾದ ಗದ್ದೆಬಯಲು ಎದುರಾಯಿತು. ಈಗಷ್ಟೆ ನೆಟ್ಟಿ ಮಾಡಿದ್ದು, ಹಚ್ಚ ಹಸುರು. ಕ್ಯಾಬ್ ನಿಲ್ಲಿಸಲು ಹೇಳಿ ಕೂಡಲೇ ಕೆಳಗಿಳಿದೆ. ರಾಜ ಮಾರ್ಗದ ಮಗ್ಗುಲಲ್ಲಿ ಕಿರಿದಾದ ರಸ್ತೆ, ಅಕ್ಕ ಪಕ್ಕದಲ್ಲಿ ಗದ್ದೆ, ಡೊಂಕಾದ ರಸ್ತೆಯ ದೂರದಲ್ಲಿ ಸೈಕಲ್ ಸವಾರ. ನಾನು ಫೋಟೋ ತೆಗೆಯುವುದರೊಳಗೆ ಆತ ಮುಂದೆ ಹೋಗಬಹುದೆಂದು ಓಡತೊಡಗಿದೆ. ಇನ್ನೇನು ಹತ್ತಿರ ಬಂದೆ, ಅಷ್ಟರಲ್ಲಿ ಆತ ಹೋಗಿಯಾಗಿತ್ತು. ಹಿಂದೆ ನೋಡಿದೆ, ಮಿತ್ರ ಅನಿಲ್ ಹಿಂಬಾಲಿಸುತ್ತಿದ್ದನು. ಅವನ ಮುಖ ನೋಡಿ, "ಹೋಗ್ಬೇಕಾ ಮಠಕ್ಕೆ?" ಕೇಳಿದೆ. ಆತನಿಗೂ ಸ್ಥಳ ಹಿಡಿಸಿದ್ದರಿಂದ ಹಳ್ಳಿಯ ದಾರಿ, ಗದ್ದೆಯ ಅಂಚಿನಲ್ಲಿ ನಡೆಯುತ್ತಾ, ರೈತರೊಂದಿಗೆ ಮಾತಿಗಿಳಿಯುತ್ತಾ, ನನಗೆ ಬೇಕಾದ ಚಿತ್ರ ತೆಗೆಯುತ್ತಾ ಸಂತೋಷವಾಗಿದ್ದೆ. ಉಳಿದವರು ತಮ್ಮ ಪ್ರಯಾಣ ಮುಂದುವರೆಸಿದರು. ಹಾಗೆಯೇ ಕೆಳಗಿನವು ನಾ ಸೆರೆಹಿಡಿದ ಸೈಕಲ್ ಚಿತ್ರಗಳು.
ಮಳೆಯಲ್ಲಿ ತೋಯ್ದ ಸೈಕಲ್
ಡಬ್ಬಲ್ ರೈಡಿನ ಮಜಾ
ಮೋಡವನ್ನು ಹಿಂಬಾಲಿಸಿ
ಪರಿಸರ ಸ್ನೇಹಿ ವಾಹನ
"If we admit that human life can be ruled by reason, then all possibility of life is destroyed."
— Leo Tolstoy
Tuesday, August 10, 2010
ರಾಘವೇಂದ್ರ ಶರ್ಮಾ ತಲವಾಟ ಮತ್ತವರ ಜೇನು ಕೃಷಿ
ಕಳೆದ ವಾರಾಂತ್ಯ ಸ್ನೇಹಿತರೊಂದಿಗೆ ಮಲೆನಾಡ ಜೋಗ, ಕೆಳದಿ, ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ ಬಂದೆ. ತಂಗಿದ್ದು ಜೋಗದ ಬಳಿಯ ತಲವಾಟ ಎಂಬ ಹಳ್ಳಿಯ ಹೋಂ ಸ್ಟೇ ಒಂದರಲ್ಲಿ. ಅದರ ಮಾಲೀಕರು ಮಲೆನಾಡ ವೈವಿಧ್ಯವನ್ನು ತಮ್ಮ ಬ್ಲಾಗಿನಲ್ಲಿ ಚಿತ್ರಿಸುತ್ತಾ ಬಂದ ರಾಘವೇಂದ್ರ ಶರ್ಮ ತಲವಾಟರು. ಅನೇಕ ಮಲೆನಾಡಿನ ವೈವಿಧ್ಯಮಯ ಖಾದ್ಯಗಳನ್ನು ಮಳೆಗಾಲದಲ್ಲಿ ಉಣಬಡಿಸಿ ನಮ್ಮ ನಾಲಿಗೆ ಚಪಲವನ್ನು ಹೆಚ್ಚಿಸಿದ್ದಾರೆ.
ಕೃಷಿಯಲ್ಲಿ ತೊಡಗಿರುವ ಶರ್ಮಾರವರು ಜೇನುಸಾಕಣೆಯನ್ನೂ ಮಾಡುತ್ತಿದ್ದಾರೆ. ನಮಗೋಸ್ಕರ ತಮ್ಮ ಮನೆಯಲ್ಲಿನ ಜೇನುಪೇಟ್ಟಿಗೆಯನ್ನು ಹೊತ್ತುತಂದು ನಮಗೆ ತೋರಿಸಿದ್ದಕ್ಕೆ ಅವರಿಗೊಂದು ಧನ್ಯವಾದ.
ರಾಘವೇಂದ್ರ ಶರ್ಮಾ ತಲವಾಟರು
ಜೇನು ಪೆಟ್ಟಿಗೆಯೊಳಗೆ ನುಸುಳುತ್ತಿರುವ ಜೇನು
ಜೇನಿನ ಹಲ್ಲೆಯೊಂದನ್ನು ಹೊರತೆಗೆಯುತ್ತಿರುವುದು
ಗೂಡಿನ ತುಂಬ ಸಿಹಿ ತುಪ್ಪ
ಗೂಡನ್ನು ಚೂರಿಯಿಂದ ಕೊಂಚ ಕತ್ತರಿಸಿದಾಗ ಒಸರಿದ ಜೇನು
ತಾಜಾ ಜೇನು (ಉಳಿದವರು ಗೂಡಿನ ಜೊತೆ ತಿನ್ನಲು ಹಿಂದೆ ಮುಂದೆ ನೋಡಿದ್ದರಿಂದ ಹೆಚ್ಚು ಕಡಿಮೆ ಇದು ನನ್ನ ಹೊಟ್ಟೆ ಸೇರಿತು)
ರಾಘವೇಂದ್ರ ಶರ್ಮಾ ತಲವಾಟ, ಅವರ ಹೋಂ ಸ್ಟೇಯಲ್ಲಿ
ಅಂದ ಹಾಗೇ ಹೋಂ ಸ್ಟೇ ಸೂಪರಾಗಿತ್ತು. ಹೆಚ್ಚಿನ ವಿವರಕ್ಕೆ ರಾಘವೇಂದ್ರರನ್ನು ಸಂಪರ್ಕಿಸಿ.
ಕೃಷಿಯಲ್ಲಿ ತೊಡಗಿರುವ ಶರ್ಮಾರವರು ಜೇನುಸಾಕಣೆಯನ್ನೂ ಮಾಡುತ್ತಿದ್ದಾರೆ. ನಮಗೋಸ್ಕರ ತಮ್ಮ ಮನೆಯಲ್ಲಿನ ಜೇನುಪೇಟ್ಟಿಗೆಯನ್ನು ಹೊತ್ತುತಂದು ನಮಗೆ ತೋರಿಸಿದ್ದಕ್ಕೆ ಅವರಿಗೊಂದು ಧನ್ಯವಾದ.
ರಾಘವೇಂದ್ರ ಶರ್ಮಾ ತಲವಾಟರು
ಜೇನು ಪೆಟ್ಟಿಗೆಯೊಳಗೆ ನುಸುಳುತ್ತಿರುವ ಜೇನು
ಜೇನಿನ ಹಲ್ಲೆಯೊಂದನ್ನು ಹೊರತೆಗೆಯುತ್ತಿರುವುದು
ಗೂಡಿನ ತುಂಬ ಸಿಹಿ ತುಪ್ಪ
ಗೂಡನ್ನು ಚೂರಿಯಿಂದ ಕೊಂಚ ಕತ್ತರಿಸಿದಾಗ ಒಸರಿದ ಜೇನು
ತಾಜಾ ಜೇನು (ಉಳಿದವರು ಗೂಡಿನ ಜೊತೆ ತಿನ್ನಲು ಹಿಂದೆ ಮುಂದೆ ನೋಡಿದ್ದರಿಂದ ಹೆಚ್ಚು ಕಡಿಮೆ ಇದು ನನ್ನ ಹೊಟ್ಟೆ ಸೇರಿತು)
ರಾಘವೇಂದ್ರ ಶರ್ಮಾ ತಲವಾಟ, ಅವರ ಹೋಂ ಸ್ಟೇಯಲ್ಲಿ
ಅಂದ ಹಾಗೇ ಹೋಂ ಸ್ಟೇ ಸೂಪರಾಗಿತ್ತು. ಹೆಚ್ಚಿನ ವಿವರಕ್ಕೆ ರಾಘವೇಂದ್ರರನ್ನು ಸಂಪರ್ಕಿಸಿ.
Subscribe to:
Posts (Atom)
ವರ್ಗ
Amomum
(1)
ficus krishnae
(1)
Gangtok
(1)
Nikon 40mm f/2.8 Micro
(10)
paris
(1)
Sikkim
(8)
snow
(1)
Yuksom
(5)
ಅನಿಮೇಟೆಡ್
(1)
ಅನುಭವ ಕಥನ
(7)
ಅಮೂರ್ತ
(1)
ಆಟೋಟ
(2)
ಆಫಿಡ್
(1)
ಇರುವೆ
(6)
ಉಡುಪಿ
(4)
ಉಯ್ಯಾಲೆ
(1)
ಉರಗ
(3)
ಏರಿ
(1)
ಒಂಟಿ ಚಕ್ರದ ಸೈಕಲ್
(1)
ಒಯ್ಯುಗೆ
(6)
ಕದ
(1)
ಕಂದು ಏಲಕ್ಕಿ
(1)
ಕನ್ನಡ
(2)
ಕಪ್ಪು ಏಲಕ್ಕಿ
(1)
ಕಪ್ಪು-ಬಿಳುಪು
(5)
ಕಂಬಳ
(1)
ಕಂಬಳಿಹುಳು
(2)
ಕವನ
(15)
ಕವಿ ಶೈಲ
(1)
ಕಸರತ್ತು
(1)
ಕಳಸ
(1)
ಕಳ್ಳತನ
(1)
ಕಾವೇರಿ
(1)
ಕಾಳಾವಾರ ಬೆಟ್ಟ
(1)
ಕಾಳಿಂಗ ಸರ್ಪ
(1)
ಕಿಸ್ಕಾರ
(1)
ಕೀಟ ಪ್ರಪಂಚ
(35)
ಕುಂದಾಪುರ
(1)
ಕುವೆಂಪು
(1)
ಕೃಷಿ
(9)
ಕೃಷಿ ಮೇಳ
(4)
ಕೆರೆ
(2)
ಕೆಲಸ
(2)
ಕೆಸು
(2)
ಕೆಳದಿ
(1)
ಕೊಕ್ಕರೆ ಬೆಳ್ಳೂರು
(1)
ಕೋಟ
(8)
ಖಗೋಳ ಗಡಿಯಾರ
(1)
ಗವಿ
(1)
ಗುಡಿ ಕೈಗಾರಿಕೆ
(1)
ಗುಡ್ಡ
(2)
ಗುಹೆ
(1)
ಚಾರಣ
(3)
ಚಿಕ್ಕಮಗಳೂರು
(1)
ಚಿಟ್ಟಾಣಿ
(1)
ಚಿಟ್ಟೆಗಳು
(3)
ಚಿತ್ರ ಪುಟ
(102)
ಚಿತ್ರದುರ್ಗ
(1)
ಚಿತ್ರಪುಟ
(1)
ಚೌಕಾಶಿ
(1)
ಛಾಯಾಗ್ರಹಣ
(24)
ಜನ ಜೀವನ
(52)
ಜನಪದ
(2)
ಜರ್ಮನಿ
(1)
ಜಲಪಾತ
(1)
ಜೆಕ್ ಗಣರಾಜ್ಯ
(4)
ಜೇಡ
(3)
ಜೇನು ಸಾಕಣೆ
(1)
ಜೋಡಿ
(1)
ತರಕಾರಿ
(2)
ತುಮಕೂರು
(2)
ತೆಂಗಿನ ಕಾಯಿ
(1)
ತೆಂಗಿನ ತೋಟ
(1)
ದಸರ
(4)
ದೇವವೃಂದ
(1)
ದೇವಸ್ಠಾನ
(1)
ದೇವಸ್ಥಾನ
(1)
ದೊಡ್ಡ ಏಲಕ್ಕಿ
(1)
ಧಾರವಾಡ
(1)
ನಗರ
(1)
ನಂಬಿಕೆ
(1)
ನಾಟಕ
(1)
ನೀರ್ಹಕ್ಕಿ
(6)
ಪತಂಗ
(1)
ಪತ್ರಿಕೋದ್ಯಮ
(1)
ಪಶ್ಚಿಮ ಘಟ್ಟ
(2)
ಪಾರ್ಕ್
(1)
ಪಾಳು
(1)
ಪುಸ್ತಕ ಬಿಡುಗಡೆ
(1)
ಪೋರ್ಟ್ರೈಟ್
(8)
ಪ್ಯಾನಿಂಗ್
(1)
ಪ್ರಬಂಧ
(2)
ಪ್ರವಾಸ ಕಥನ
(3)
ಪ್ರಾಹ
(1)
ಪ್ಲಾಸ್ಟಿಕ್
(1)
ಬಕೇಟ್
(1)
ಬಂಡಿ
(1)
ಬಣ್ಣ
(1)
ಬನವಾಸಿ
(1)
ಬಳ್ಳಿ
(1)
ಬಾಗಿಲು
(1)
ಬಾರ್ಕೂರು
(1)
ಬೀಗ
(1)
ಬೆಂಕಿ
(1)
ಬೆಂಗಳೂರಿನ ಚಿತ್ರಗಳು
(5)
ಬೆಂಗಳೂರು
(27)
ಬೆಳಕು
(1)
ಬೇಸಾಯ
(1)
ಬ್ರಹ್ಮಾವರ
(1)
ಭಾರತ ಬಂದ್
(1)
ಭಿಕ್ಷುಕರು
(1)
ಮಕ್ಕಳು
(10)
ಮಗು
(1)
ಮಂಜು
(2)
ಮಮ್ಮಮ್
(3)
ಮಲೆನಾಡು
(1)
ಮಳೆ
(1)
ಮಳೆಗಾಲ
(2)
ಮಾರಿಕಣಿವೆ
(1)
ಮುಸ್ಸಂಜೆ
(1)
ಮೇಲುಕೋಟೆ
(2)
ಮೇವು
(1)
ಮೈಸೂರು
(7)
ಮೋಡ
(2)
ಮ್ಯಾಕ್ರೋ
(12)
ಯಕ್ಷಗಾನ
(2)
ರಸ್ತೆ
(5)
ರಾತ್ರಿ ನೋಟ
(3)
ರೈಮ್
(1)
ರೈಲು
(2)
ರೈಲುಹಳಿ
(1)
ಲಲಿತ ಪ್ರಬಂಧ
(6)
ಲೇಪಾಕ್ಷಿ
(1)
ವಂಡಾರ್
(1)
ವಾಸ್ತು ಶಿಲ್ಪ
(1)
ವಾಹನ
(2)
ವಿವೇಕ
(1)
ವಿಸ್ತರಣೆ
(1)
ವ್ಯಕ್ತಿ ವಿಷಯ
(3)
ವ್ಯಾಪಾರ
(1)
ಶಾಲೆ
(1)
ಶಿರಸಿ
(1)
ಶಿರಸಿ. ಸೈಕಲ್
(1)
ಶಿಲ್ಪ
(1)
ಶಿವನಸಮುದ್ರ
(1)
ಶುಭಾಶಯ
(2)
ಸಣ್ಣ ಕಥೆ
(4)
ಸಂತೆ
(2)
ಸಮುದ್ರ
(2)
ಸಮುದ್ರ ಜೀವಿ
(2)
ಸಸ್ಯ ಪ್ರಪಂಚ
(12)
ಸಾಕು ಪ್ರಾಣಿ
(4)
ಸಾಗಾಟ
(1)
ಸಾಸ್ತಾನ
(1)
ಸಿಕ್ಕಿಂ
(3)
ಸೈಕಲ್
(5)
ಸೈಕಲ್ ಯಾತ್ರೆ
(1)
ಸ್ಕಂದಗಿರಿ
(1)
ಸ್ತೂಪ
(1)
ಸ್ಪರ್ಧೆ
(1)
ಹಕ್ಕಿಗಳು
(21)
ಹರಿಹರ
(1)
ಹಳ್ಳಿ
(3)
ಹಿಮ
(1)
ಹೂಗಳು
(5)
ಹೂವು
(1)
ಹೊಸ ವರ್ಷ
(1)
ಹೋಂ ಸ್ಟೇ
(1)
ಹೌರಾ
(1)