Sunday, December 21, 2008

ನಿಸರ್ಗದಲ್ಲಿ ರಿಸೇಶನ್

ಹಿನ್ನೆಲೆ:
ನಿಸರ್ಗದಲ್ಲಿ ಉತ್ಪಾದನೆಗಿಂತ ಬಳಕೆ ಜಾಸ್ತಿಯಾಗಿದ್ದು, ಈ ನಿಮಿತ್ತ ನಿಸರ್ಗ ಜಗತ್ತಿನ ಎಲ್ಲಾ ಜೀವಿಗಳ ಸಭೆ ಕರೆದು ಕೋಸ್ಟ್ ಕಟ್ಟಿಂಗ್ ಬಗ್ಗೆ ಸಮಾವೇಶ ನಡೆಸಿತ್ತು. ಉತ್ಪಾದನೆಗೆ ಯಾರ ಕೊಡುಗೆ ಎಷ್ಟು, ಯಾರ ಬಳಕೆ ಅತೀ ಹೆಚ್ಚು, ಹೇಗೆ ಈ ಸಂಕಷ್ಟದಿಂದ ಪಾರಾಗುವುದು ಎನ್ನುವುದೇ ಈ ಸಮಾವೇಶದ ಉದ್ದೇಶ. ಈ ಬಗ್ಗೆ ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲಾ ಜೀವಿಗಳ ಪರಿಶೀಲನೆ ಮಾಡಿ ಈ ನಿರ್ಧಾರಕ್ಕೆ ಬರುತ್ತದೆ.

ತೀರ್ಮಾನ:
ನನಗೆ ಬಹಳ ಕಾಲದಿಂದ ಇಂತಹ ಪರಿಸ್ಥಿತಿ ಎಂದೂ ಎದುರಾದದ್ದಿಲ್ಲ, ಈ ರೀತಿಯ ಅವನತಿ ತೀರಾ ಇತ್ತೀಚೆಗಿನದ್ದು. ಹಾಗಾದರೆ ಇತ್ತೀಚೆಗೆ ಸೇರ್ಪಡೆಯಾದ ಜೀವಿ, ಅಂದರೆ ಜೈವಿಕ ಸರಪಳಿಯಲ್ಲಿನ ಕೊನೇಯ ಕೊಂಡಿಯಾದ ಮಾನವ ಇದಕ್ಕೆ ಕಾರಣನೇ? ನನ್ನ ಕಾಲಮಾನದ ದೃಷ್ಟಿಯಲ್ಲಿ, ಇನ್ನಿತರ ಜೀವಿಗಳ ಎದುರಿನಲ್ಲಿ ಮನುಜರು ಇನ್ನೂ ಶಿಶು. ಉಳಿದ ಜೀವಿಗಳಾದರೋ ತಮ್ಮ ತ್ಯಾಗಮಯ ಜೀವನದಿಂದ, ಒಂದಕ್ಕೊಂದು ಆಸರೆಯಾಗಿ ನನ್ನ ಸಂಪತ್ತನ್ನು ವೃದ್ಧಿಸುತ್ತಾ ಬಂದಿವೆ. ಅವುಗಳ ಬದುಕು ಕೂಡಾ ಎಷ್ಟು ಸರಳ. ದೈನಿಂದಿನ ಆವಶ್ಯಕತೆಯಾದ ಆಹಾರ, ಗಾಳಿ, ನೀರು, ಕೆಲವೊಂದು ಬಾರಿ ಅನನುಕೂಲ ಪರಿಸ್ಥಿತಿಯಲ್ಲಿ ಹೆಚ್ಚಿನ ಆಹಾರ ಸಂಗ್ರಹಿಸುವುದಲ್ಲದೇ ಅವುಗಳ ಬಳಕೆ ಉತ್ಪಾದನೆಗಿಂತ ಕಡಿಮೆ. ಆದರೆ ಮಾನವರು ಇದಕ್ಕೆ ವ್ಯತಿರಿಕ್ತ. ಆವಶ್ಯಕತೆಗಿಂತ ಅಧಿಕ ಬಳಕೆ, ಉತ್ಪಾದನೆ ಶೂನ್ಯ. ಈ ಹಿಂದೆ ಹೆಚ್ಚು ಕಡಿಮೆ ಡೈನೋಸಾರ್ಗಳೂ ಮಾಡಿದ್ದು ಇದನ್ನೇ ಅಲ್ಲವೇ? ಜೈವಿಕ ಸರಪಳಿಯಲ್ಲಿ ಕೊನೇಯ ಕೊಂಡಿಯಾದ ಅದನ್ನು ಕಿತ್ತೊಗೆದದ್ದರಿಂದ ನನಗಾವ ನಷ್ಟವೂ ಆಗಿಲ್ಲ. ಇತರ ಜೀವಿಗಳ ಉತ್ಪಾದನೆಯನ್ನು ಕೊಳ್ಳೆ ಹೊಡೆಯುತ್ತಾ, ಉಳಿದ ಸಮಯದಲ್ಲಿ ನನ್ನ ಸಂಪತ್ತನ್ನು ಹೆಚ್ಚಿಸುವ ಕೆಲಸ ಮಾಡದೆ ವ್ಯರ್ಥ ಕಾಲಹರಣದಲ್ಲಿ ತೊಡಗುವ ಈ ಮಾನವರ ಕೊಂಡಿ ಕಳಚಿದರೆ ನನಗೆ ಲಾಭವಲ್ಲದೇ ನಷ್ಟ ಇದೆಯೇ?

ಪರಿಣಾಮ:
ರಿಸೇಶನ್, ಸರಳ ಜೀವನ ಮಿಕ್ಸ್ ಆಗಿ ಬಿದ್ದ ಕನಸು, ಮುಂದೇನಾಯ್ತೋ ನೀವೇ ಊಹಿಸಿಕೊಳ್ಳಿ.

10 comments:

  1. ಲಕ್ಷ್ಮಿ,

    "ಅನುಭವ ಮಂಟಪಕ್ಕೆ" ಸ್ವಾಗತ.. ನಿಮ್ಮ ಮೆಚ್ಚುಗೆಗೆ ವಂದನೆಗಳು.

    --
    ಪಾಲ

    ReplyDelete
  2. ಪಾಲಚಂದ್ರ,

    ಅಂತೂ ನಮಗೆಲ್ಲರಿಗೂ ಒಂದು ಗತಿ ಕಾಣಿಸುವ ಕನಸು ಕಂಡಿದ್ದೀರಿ....ಮುಂದಿನ ಜನ್ಮದಲ್ಲಿ ಬೇರೆ ಪ್ರಾಣಿಗಳಾಗಿ ಇಂಥದೇ ಸಭೆಯಲ್ಲಿ ಬೇಟಿಯಾಗೋಣ....

    ReplyDelete
  3. ಶಿವು,
    ಮುಂದಿನ ಜನ್ಮ ಅಂತ ಇದ್ದರೆ ಅವಶ್ಯ ಭೇಟಿ ಆಗೋಣ :)
    --
    ಪಾಲ

    ದೀಪ್,
    "ಅನುಭವ ಮಂಟಪಕ್ಕೆ" ಸ್ವಾಗತ. :)

    ReplyDelete
  4. palachandra,

    Tumba channaigi ede....

    ReplyDelete
  5. Gopi here as Anamadheaya...:-)

    ReplyDelete
  6. Anamadheya Gops dhanyavada kanla :)
    --
    PaLa

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)