ಸಿರಿಧಾನ್ಯದ ಅರಿವು ಜನರಲ್ಲಿ ಮೂಡಿಸುವುದೊಂದು ಪುಣ್ಯದ ಕೆಲಸ

"ಗಂಗಾವತಿಯಲ್ಲಿ ಕಳೆನಾಷಕ, ಕೀಟ ನಾಷಕ ಯಥೇಚ್ಛವಾಗಿ ಸಿಂಪಡಿಸಿ ಬೆಳೆಯುವ ಭತ್ತದಲ್ಲಿ ಅದೆಷ್ಟು ವಿಷ ತುಂಬಿರಬಹುದು ನೀವೇ ಊಹಿಸಿ. ಗೊಬ್ಬರ ನೀರು ಎಂಬುದಾಗಿ ಪ್ರತ್ಯೇಕ ಆರೈಕೆ ಬೇಡದ, ಉತ್ತಮ ಪೋಷಕಾಂಶಗಳನ್ನೊಳಗೊಂಡ ಸಿರಿಧಾನ್ಯಗಳ ಮಹತ್ವದ ತಿಳಿವು ಜನರಿಗೆ ಮೂಡಿಸುವುದೊಂದು ಪುಣ್ಯದ ಕೆಲಸ. ಇದಕ್ಕಾಗಿ ರೈತರು, ವ್ಯಾಪಾರಿಗಳು, ಗ್ರಾಹಕರು ಸಮಾನ ವೇದಿಕೆಯಲ್ಲಿ ಒಂದುಗೂಡುವುದು ಅವಶ್ಯ", ಕೃಷ್ಣಪ್ರಸಾದರು ಸಿರಿಧಾನ್ಯ ಮೇಳದ ಮಹತ್ವವನ್ನು ತಿಳಿಸಿದರು.
ಸಿರಿಧಾನ್ಯ ಮೇಳ ಬೆಂಗಳೂರಿನ ಶಿವಾನಂದ ವೃತ್ತದ ಬಳಿಯಿರುವ ಗಾಂಧಿಭವನದಲ್ಲಿ ಫೆಬ್ರವರಿ ೫, ೬ರಂದು, ಸಹಜ ಸಮೃದ್ಧ, ಪ್ರಿಸ್ಟೀನ್ ಆರ್ಗಾನಿಕ್, ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜರಗಿತು. ಸಿರಿಧಾನ್ಯಗಳ ಪರಿಚಯ, ಆಹಾರ ಆರೋಗ್ಯದಲ್ಲಿ ಧಾನ್ಯಗಳ ಮಹತ್ವ ಜನರಿಗೆ ತಿಳಿಸುವುದು ಉದ್ದೇಶ. ಡಾ. ಶ್ರೀಕಂಠಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ, ಡಾ. ಪ್ರೇಮ, ಚೆನ್ನಭೈರೇ ಗೌಡ, ಮಲ್ಲಿಕಾರ್ಜುನ ಹೊಸಪಾಳ್ಯ, ಕೃಷ್ಣಪ್ರಸಾದ ಸಿರಿಧಾನ್ಯದ ಬಗ್ಗೆ ಉಪಯುಕ್ತ ಮಾಹಿತಿ ಹಂಚಿಕೊಂಡರು.
ಜನರಿಗೆ ಸಿರಿಧಾನ್ಯಗಳ ಪ್ರಾತ್ಯಕ್ಷಿಕ ಪರಿಚಯಕ್ಕಾಗಿ ಅವುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಇತ್ತು. ರಾಗಿ, ಮೂರು ತಿಂಗಳ ರಾಗಿ, ಸಣ್ಣಕಡ್ಡಿ ರಾಗಿ, ಜೇನು ಮುತ್ತಿಗೆ, ಹಸಿರು ಬುಂಡುಗ, ಪಿಚ್ಚ ಕಡ್ಡಿ, ಕುಳ್ಳ ರಾಗಿ, ಮಳಲಿ ರಾಗಿ ಹೀಗೆ ರಾಗಿಯಲ್ಲೇ ವೈವಿಧ್ಯತೆಗಳು. ಅಲ್ಲದೇ ನವಣೆ, ಕರಿ ನವಣೆ, ಎಡೆಯೂರು ನವಣೆ, ಹಾಲು ನವಣೆ, ಕೆಂಪು ನವಣೆ, ಬಿಳಿ ಜೋಳ, ಕೊರಲು, ಕರಿಸಾವೆ, ಆರಕ, ರಾಜ್ಗೀರ, ಇತ್ಯಾದಿ ಸಿರಿ ಧಾನ್ಯಗಳ ಪ್ರದರ್ಶನ ಮತ್ತು ಮಾರಾಟವಿತ್ತು. ಅಲ್ಲದೇ ಈ ಸಿರಿಧಾನ್ಯಗಳಿಂದ ಮಾಡಿದ ಬಿಸ್ಕತ್ತು, ರೊಟ್ಟಿ, ಹಾಲಿನ ಜೊತೆ ಸೇವಿಸುವ ಪುಡಿ, ರಾಗಿಯ ಸಿಹಿ ಉಂಡೆ, ದೋಸೆ ಹಿಟ್ಟು, ಮೊದಲಾದ ಮೌಲ್ಯವರ್ಧಿತ ಉತ್ಪನ್ನಗಳನ್ನೂ ಜನರಿಗೆ ಪರಿಚಯಿಸಲಾಯ್ತು. ಇದರ ಜೊತೆಗೆ ಕೃಷಿ ಪುಸ್ತಕ ಮಳಿಗೆ, ಸಾವಯವ ಕೃಷಿ ಉತ್ಪನ್ನಗಳೂ ಮಾರಾಟಕ್ಕಿದ್ದವು.

ಡಯಟೀಶಿಯನ್ ಡಾ. ಪ್ರೇಮ ಸಿರಿಧಾನ್ಯದ ಅವನತಿ, ಅವುಗಳ ಮಹತ್ವದ ಬಗ್ಗೆ ತಿಳಿಸಿದರು. ಎರಡನೇ ಪ್ರಪಂಚ ಯುದ್ಧಾನಂತರ ದೇಶದಲ್ಲಿ ಆಹಾರಕ್ಕೆ ಹಾಹಾಕಾರ ಕಾಣಿಸಿಕೊಂಡಿತು. ಸರಕಾರದ ವತಿಯಿಂದ ಜಾರಿಗೆ ಬಂದ ಪಡಿತರ ವಿತರಣೆಯಲ್ಲಿ ಗೋಧಿ, ಅಕ್ಕಿಗೆ ಸ್ಥಾನ ದೊರೆಯಿತಾದರೂ ಸುಮಾರು ೨೫ ಬಗೆಯ ಸಿರಿಧಾನ್ಯಗಳು ಹೊರಗುಳಿದವು. ಸಹಜವಾಗಿ ಇವು ಜನರಲ್ಲಿ ಗೋಧಿ, ಅಕ್ಕಿಗಳು ಮಾತ್ರ ಸತ್ವಯುಕ್ತ ಆಹಾರ ಎಂಬ ತಪ್ಪು ಸಂದೇಶವನ್ನು ಜನರಲ್ಲಿ ಮೂಡಿಸಿತು.
ಅರವತ್ತರ ದಶಕದಲ್ಲಿ ಅಮೇರಿಕಾದಲ್ಲಿನ ಆಹಾರ ಕ್ರಾಂತಿಯ ಫಲವಾಗಿ ಅತಿಯಾಗಿ ಬೆಳೆಯಿಸಿದ ಗೋಧಿಯನ್ನು ಭಾರತದಂತಹ ದೇಶಗಳಿಗೆ ಪುಕ್ಕಟೆಯಾಗಿ ವಿತರಿಸಲಾಯ್ತು. ಅಲ್ಲಿಯವರ ಮತ್ತು ಗೋಧಿ ಬೆಳೆಯುವ ನಮ್ಮ ದೇಶದವರಾದ ಪಂಜಾಬಿನ ಜನರ ನೀಳವಾದ, ದಷ್ಟ ಪುಷ್ಟವಾದ ಮೈಕಟ್ಟೂ ಕೂಡ ಗೋಧಿ ಅತ್ಯುತ್ತಮ ಆಹಾರ ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೂಡಿಸಿತು. ಆದರೆ ಅವರ ಶಾರೀರಿಕ ರಚನೆಗೆ ವಂಶವಾಹಿ ಕಾರಣವೆಂಬುದನ್ನು ಗ್ರಹಿಸುವಲ್ಲಿ ಜನಮಾನಸ ವಿಫಲವಾಯ್ತು.
ಅಲ್ಲದೇ ಸರಕಾರ ಅಂಗನವಾಡಿ, ಬಾಲವಾಡಿಗಳಲ್ಲಿಯೂ ಗೋಧಿ, ಗೋಧಿಯ ಉತ್ಪನ್ನ ಮಕ್ಕಳಿಗೆ ಹಂಚಲಾರಂಭಿಸಿತು. ಮಕ್ಕಳು ಮೊದಲಿಗಿಂತಲೂ ದೈಹಿಕವಾಗಿ, ಮಾನಸಿಕವಾಗಿ ಚೆನ್ನಾಗಿ ಬೆಳೆಯಲಾರಂಭಿಸಿದರು. ಯಾವುದೇ ಆಹಾರ ನಾಲ್ಕು ತುತ್ತು ಹೆಚ್ಚು ತಿಂದಿದ್ದರೂ ಚೆನ್ನಾಗಿ ಬೆಳೆಯುತ್ತಿದ್ದರು ಎಂಬುದರ ಬದಲಿಗೆ ಗೋಧಿ ಸೇವಿಸಲಾರಂಭಿಸಿದ್ದು ಈ ಬದಲಾವಣೆ ಕಾರಣ ಎಂಬ ಇನ್ನೊಂದು ತಪ್ಪು ಕಲ್ಪನೆ ಜನರಲ್ಲಿ ಬೇರೂರಿತು.
ಅಭಿವೃದ್ಧಿ, ಆಧುನಿಕತೆ ಹಾಗೂ ಇಳುವರಿಯನ್ನೇ ಗುರಿಯಾಗಿಟ್ಟುಕೊಂಡ ಕೃಷಿ ಪದ್ಧತಿಗೂ ಸಿರಿಧಾನ್ಯಗಳು ಬಲಿಯಾದವು. ಪರಿಣಾಮ ಜನರು ಸಿರಿಧಾನ್ಯಗಳನ್ನು ಮರೆಯಲಾರಂಭಿಸಿದರು. ಇದರಿಂದ ಇವುಗಳನ್ನು ಬೆಳೆಯುತ್ತಿದ್ದ ರೈತರಿಗೂ ಹೊಡೆತ, ಜನರ ಆರೋಗ್ಯದ ಮೇಲೂ ಹೊಡೆತ
.
“ಜೀವನ ಶೈಲಿ ಚೆನ್ನಾಗಿದ್ದರೆ ಆರೋಗ್ಯವಿರುತ್ತದೆ. ಜೀವನಶೈಲಿಗೂ ನಮ್ಮ ಆಹಾರಾಭ್ಯಾಸಕ್ಕೂ ನಿಕಟ ಸಂಬಂಧ” ಎಂದು ಡಾ. ಶ್ರೀಕಂಠಯ್ಯನವರು ಜನರ ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳ ಮಹತ್ವ ತಿಳಿಸಿದರು. ಸಿರಿಧಾನ್ಯಗಳು ಕೇವಲ ಬರಗಾಲದ ಆಹಾರಮಾತ್ರವಲ್ಲ, ಆರೋಗ್ಯಕರ ಆಹಾರ ಪದ್ಧತಿ ಕೂಡ. ಗೋಧಿ, ಅಕ್ಕಿಗಿಂತ ನಾಲ್ಕು ಪಟ್ಟು ಇದರಲ್ಲಿ ಆಹಾರಾಂಶವಿದೆ. ಸಿರಿಧಾನ್ಯಗಳು ಅಧಿಕ ಅಮಿಲೋಸ್ ಅಂಶವನ್ನು ಹೊಂದಿದ್ದು, ನಾರಿನಂಶ (ಡಯಟರಿ ಫೈಬರ್) ಗಳ ಅತ್ಯುತ್ತಮ ಮೂಲಗಳಾಗಿವೆ. ಇವು ಸಕ್ಕರೆಯನ್ನು ನಿಧಾನವಾಗಿ ಹೀರಿಕೊಂಡು, ರಕ್ತದಲ್ಲಿ ಕರಾರುವಕ್ಕಾಗಿ ಬಿಡುಗಡೆ ಮಾಡುತ್ತವೆ. ಆಧುನಿಕ ಆಹಾರ ಪದ್ಧತಿಯ ಬಹುಮುಖ್ಯ ಅಡ್ಡಿಯೆಂದರೆ ನಾರಿನಂಶದ ಕೊರತೆ.
ಸಿರಿಧಾನ್ಯಗಳಲ್ಲಿರುವ ಖನಿಜಾಂಶಗಳು ಗಮನಾರ್ಹ. ಮಾತ್ರೆಗಳು ಭರ್ಜರಿಯಾಗಿ ಮಾರಾಟವಾಗುತ್ತಿರುವ ಇಂದಿನ ದಿನಗಳಲ್ಲಿ, ಆ ಸ್ಥಾನವನ್ನು ಸಿರಿಧಾನ್ಯಗಳು ಸಮರ್ಥವಾಗಿ ತುಂಬುತ್ತವೆ.
ರೋಗಗಳನ್ನು ನಿಯಂತ್ರಿಸುವ ಫಿನೋಲಿಕ್ ಆಸಿಡ್, ಪ್ಲೆವನೋಯ್ಡ್ಸ್ ಹಾಗೂ ಫೈಟೋಆಲೆಕ್ಸಿನ್ನಂಥ ಫೈಟೋನ್ಯೂಟ್ರಿಯಂಟ್ಸ್ಗಳನ್ನು ಸಿರಿಧಾನ್ಯಗಳು ಹೊಂದಿವೆ. ಇವು ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್ಗಳು. ಸಿರಿಧಾನ್ಯಗಳು ಕೇವಲ ಕಾರ್ಬೋಹೈಡ್ರೇಟ್ ಮಾತ್ರವಲ್ಲ, ಉತ್ತಮ ಗುಣಮಟ್ಟದ ಕೊಬ್ಬನ್ನು ಕೂಡ ಪೂರೈಸುತ್ತದೆ. ಉದಾಹರಣೆಗೆ ಸಜ್ಜೆಯಲ್ಲಿರುವ ಕೊಬ್ಬಿನಲ್ಲಿ ಶೇಕಡಾ 2.3ರಿಂದ ಶೇಕಡಾ 5.8ರಷ್ಟು ಒಮೆಗಾ-3 ಕೊಬ್ಬಿನಾಮ್ಲ ಇರುತ್ತದೆ.
“ತುಮಕೂರು, ಅನಂತಪುರ ಜಿಲ್ಲೆಯಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ, ಸಿರಿಧಾನ್ಯಗಳಲ್ಲೊಂದಾದ ಕೊರಲೆ ಈಗ ಕಣ್ಮರೆಯಾಗುತ್ತಿರುವ ಬೆಳೆ”, ಮಲ್ಲಿಕಾರ್ಜುನ ಹೊಸಪಾಳ್ಯರು ಕೊರಲೆಯ ಪರಿಚಯ ಮಾಡಿಸಿದರು. ಆಧುನಿಕ ಕೃಷಿಯ ಸುಳಿಗಾಳಿಗೆ ಸಿಲುಕಿ ನಲುಗುತ್ತಿರುವ "ಕೊರಲೆ"ಯ ಬಗ್ಗೆ ಮಾಹಿತಿ ಕಲೆಹಾಕಿ, “ಕಣ್ಮರೆಯ ಹಾದಿಯಲ್ಲಿ ಕೊರಲೆ” ಪುಸ್ತಕದಲ್ಲಿ ಇವರು ದಾಖಲಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಈ ಪುಸ್ತಕವನ್ನು ಡಾ. ಶ್ರೀಕಂಠಯ್ಯ ಅನಾವರಣಗೊಳಿಸಿದರು. ಸಿರಿಧಾನ್ಯಗಳ ಬೀಜದ ಬಗ್ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದವರ ವಿಳಾಸವೂ ಪುಸ್ತಕದಲ್ಲಿದೆ. ಬೆಂಗಳೂರಿನ ಸಹಜ ಸಮೃದ್ಧ, ತುಮಕೂರಿನ ಧಾನ್ಯ ಸಂಸ್ಥೆ, AICSMIP ಜಂಟಿ ಪ್ರಕಾಶನದಲ್ಲಿ ಹೊರಬಂದ ಈ ಪುಸ್ತಕದ ಬೆಲೆ 10 ರೂಪಾಯಿಗಳು.

ಕಾರ್ಯಕ್ರಮದ ಅಂತ್ಯದಲ್ಲಿ ರೈತರಿಗೆಂದೇ ಪ್ರಶ್ನೋತ್ತರ ಕಾರ್ಯಕ್ರಮವಿತ್ತು. ಇದರಲ್ಲಿ ಗಮನ ಸೆಳೆದ ಒಂದು ಪ್ರಶ್ನೆ, “ರೈತ ಜನರ ಅವಶ್ಯಕತೆ ನೋಡಿ ಬೆಳೆಯಬೇಕೆ ಅಥವಾ ತನ್ನ ಅವಶ್ಯಕತೆ ನೋಡಿಯೇ ಎಂದು. ಏಕೆಂದರೆ ಸಿರಿಧಾನ್ಯಗಳನ್ನು ಜನರ ಆರೋಗ್ಯದ ಹಿತ ದೃಷ್ಟಿಯಿಂದ ಬೆಳೆಯಿಸಿದರೂ ಕೊನೆಯಲ್ಲಿ ರೈತರಿಗೆ ಅದು ಲಾಭದಾಯಕವೇ?” ಎಂಬುದು. ಅದಕ್ಕೆ ಉತ್ತರಿಸಿದ ಇನ್ನೊಬ್ಬ ರೈತ ಮಿತ್ರರು, “ಸಿರಿಧಾನ್ಯದ ಮಹತ್ವ ಜನರಿಗಿನ್ನೂ ಪರಿಚಯವಾಗುವ ಹಂತದಲ್ಲಿದೆ. ಮೊದಲಿಗೆ ನಿಮ್ಮ ಮನೆಗೆ ಬೇಕಾದಷ್ಟು ಬೆಳೆಯಿರಿ. ಸ್ವಲ್ಪ ನಿಮ್ಮ ಸುತ್ತಮುತ್ತಲಿನವರಿಗೆ ಪರಿಚಯಿಸಿ. ನಿಧಾನವಾಗಿ ಜನರಿಗೆ ಪರಿಚಯವಾಗುತ್ತದೆ. ನಂತರ ಬೇಡಿಕೆ ಬರುತ್ತದೆ” ಎಂದರು.

"ಗಂಗಾವತಿಯಲ್ಲಿ ಕಳೆನಾಷಕ, ಕೀಟ ನಾಷಕ ಯಥೇಚ್ಛವಾಗಿ ಸಿಂಪಡಿಸಿ ಬೆಳೆಯುವ ಭತ್ತದಲ್ಲಿ ಅದೆಷ್ಟು ವಿಷ ತುಂಬಿರಬಹುದು ನೀವೇ ಊಹಿಸಿ. ಗೊಬ್ಬರ ನೀರು ಎಂಬುದಾಗಿ ಪ್ರತ್ಯೇಕ ಆರೈಕೆ ಬೇಡದ, ಉತ್ತಮ ಪೋಷಕಾಂಶಗಳನ್ನೊಳಗೊಂಡ ಸಿರಿಧಾನ್ಯಗಳ ಮಹತ್ವದ ತಿಳಿವು ಜನರಿಗೆ ಮೂಡಿಸುವುದೊಂದು ಪುಣ್ಯದ ಕೆಲಸ. ಇದಕ್ಕಾಗಿ ರೈತರು, ವ್ಯಾಪಾರಿಗಳು, ಗ್ರಾಹಕರು ಸಮಾನ ವೇದಿಕೆಯಲ್ಲಿ ಒಂದುಗೂಡುವುದು ಅವಶ್ಯ", ಕೃಷ್ಣಪ್ರಸಾದರು ಸಿರಿಧಾನ್ಯ ಮೇಳದ ಮಹತ್ವವನ್ನು ತಿಳಿಸಿದರು.
ಸಿರಿಧಾನ್ಯ ಮೇಳ ಬೆಂಗಳೂರಿನ ಶಿವಾನಂದ ವೃತ್ತದ ಬಳಿಯಿರುವ ಗಾಂಧಿಭವನದಲ್ಲಿ ಫೆಬ್ರವರಿ ೫, ೬ರಂದು, ಸಹಜ ಸಮೃದ್ಧ, ಪ್ರಿಸ್ಟೀನ್ ಆರ್ಗಾನಿಕ್, ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜರಗಿತು. ಸಿರಿಧಾನ್ಯಗಳ ಪರಿಚಯ, ಆಹಾರ ಆರೋಗ್ಯದಲ್ಲಿ ಧಾನ್ಯಗಳ ಮಹತ್ವ ಜನರಿಗೆ ತಿಳಿಸುವುದು ಉದ್ದೇಶ. ಡಾ. ಶ್ರೀಕಂಠಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ, ಡಾ. ಪ್ರೇಮ, ಚೆನ್ನಭೈರೇ ಗೌಡ, ಮಲ್ಲಿಕಾರ್ಜುನ ಹೊಸಪಾಳ್ಯ, ಕೃಷ್ಣಪ್ರಸಾದ ಸಿರಿಧಾನ್ಯದ ಬಗ್ಗೆ ಉಪಯುಕ್ತ ಮಾಹಿತಿ ಹಂಚಿಕೊಂಡರು.
ಜನರಿಗೆ ಸಿರಿಧಾನ್ಯಗಳ ಪ್ರಾತ್ಯಕ್ಷಿಕ ಪರಿಚಯಕ್ಕಾಗಿ ಅವುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಇತ್ತು. ರಾಗಿ, ಮೂರು ತಿಂಗಳ ರಾಗಿ, ಸಣ್ಣಕಡ್ಡಿ ರಾಗಿ, ಜೇನು ಮುತ್ತಿಗೆ, ಹಸಿರು ಬುಂಡುಗ, ಪಿಚ್ಚ ಕಡ್ಡಿ, ಕುಳ್ಳ ರಾಗಿ, ಮಳಲಿ ರಾಗಿ ಹೀಗೆ ರಾಗಿಯಲ್ಲೇ ವೈವಿಧ್ಯತೆಗಳು. ಅಲ್ಲದೇ ನವಣೆ, ಕರಿ ನವಣೆ, ಎಡೆಯೂರು ನವಣೆ, ಹಾಲು ನವಣೆ, ಕೆಂಪು ನವಣೆ, ಬಿಳಿ ಜೋಳ, ಕೊರಲು, ಕರಿಸಾವೆ, ಆರಕ, ರಾಜ್ಗೀರ, ಇತ್ಯಾದಿ ಸಿರಿ ಧಾನ್ಯಗಳ ಪ್ರದರ್ಶನ ಮತ್ತು ಮಾರಾಟವಿತ್ತು. ಅಲ್ಲದೇ ಈ ಸಿರಿಧಾನ್ಯಗಳಿಂದ ಮಾಡಿದ ಬಿಸ್ಕತ್ತು, ರೊಟ್ಟಿ, ಹಾಲಿನ ಜೊತೆ ಸೇವಿಸುವ ಪುಡಿ, ರಾಗಿಯ ಸಿಹಿ ಉಂಡೆ, ದೋಸೆ ಹಿಟ್ಟು, ಮೊದಲಾದ ಮೌಲ್ಯವರ್ಧಿತ ಉತ್ಪನ್ನಗಳನ್ನೂ ಜನರಿಗೆ ಪರಿಚಯಿಸಲಾಯ್ತು. ಇದರ ಜೊತೆಗೆ ಕೃಷಿ ಪುಸ್ತಕ ಮಳಿಗೆ, ಸಾವಯವ ಕೃಷಿ ಉತ್ಪನ್ನಗಳೂ ಮಾರಾಟಕ್ಕಿದ್ದವು.

ಡಯಟೀಶಿಯನ್ ಡಾ. ಪ್ರೇಮ ಸಿರಿಧಾನ್ಯದ ಅವನತಿ, ಅವುಗಳ ಮಹತ್ವದ ಬಗ್ಗೆ ತಿಳಿಸಿದರು. ಎರಡನೇ ಪ್ರಪಂಚ ಯುದ್ಧಾನಂತರ ದೇಶದಲ್ಲಿ ಆಹಾರಕ್ಕೆ ಹಾಹಾಕಾರ ಕಾಣಿಸಿಕೊಂಡಿತು. ಸರಕಾರದ ವತಿಯಿಂದ ಜಾರಿಗೆ ಬಂದ ಪಡಿತರ ವಿತರಣೆಯಲ್ಲಿ ಗೋಧಿ, ಅಕ್ಕಿಗೆ ಸ್ಥಾನ ದೊರೆಯಿತಾದರೂ ಸುಮಾರು ೨೫ ಬಗೆಯ ಸಿರಿಧಾನ್ಯಗಳು ಹೊರಗುಳಿದವು. ಸಹಜವಾಗಿ ಇವು ಜನರಲ್ಲಿ ಗೋಧಿ, ಅಕ್ಕಿಗಳು ಮಾತ್ರ ಸತ್ವಯುಕ್ತ ಆಹಾರ ಎಂಬ ತಪ್ಪು ಸಂದೇಶವನ್ನು ಜನರಲ್ಲಿ ಮೂಡಿಸಿತು.
ಅರವತ್ತರ ದಶಕದಲ್ಲಿ ಅಮೇರಿಕಾದಲ್ಲಿನ ಆಹಾರ ಕ್ರಾಂತಿಯ ಫಲವಾಗಿ ಅತಿಯಾಗಿ ಬೆಳೆಯಿಸಿದ ಗೋಧಿಯನ್ನು ಭಾರತದಂತಹ ದೇಶಗಳಿಗೆ ಪುಕ್ಕಟೆಯಾಗಿ ವಿತರಿಸಲಾಯ್ತು. ಅಲ್ಲಿಯವರ ಮತ್ತು ಗೋಧಿ ಬೆಳೆಯುವ ನಮ್ಮ ದೇಶದವರಾದ ಪಂಜಾಬಿನ ಜನರ ನೀಳವಾದ, ದಷ್ಟ ಪುಷ್ಟವಾದ ಮೈಕಟ್ಟೂ ಕೂಡ ಗೋಧಿ ಅತ್ಯುತ್ತಮ ಆಹಾರ ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೂಡಿಸಿತು. ಆದರೆ ಅವರ ಶಾರೀರಿಕ ರಚನೆಗೆ ವಂಶವಾಹಿ ಕಾರಣವೆಂಬುದನ್ನು ಗ್ರಹಿಸುವಲ್ಲಿ ಜನಮಾನಸ ವಿಫಲವಾಯ್ತು.
ಅಲ್ಲದೇ ಸರಕಾರ ಅಂಗನವಾಡಿ, ಬಾಲವಾಡಿಗಳಲ್ಲಿಯೂ ಗೋಧಿ, ಗೋಧಿಯ ಉತ್ಪನ್ನ ಮಕ್ಕಳಿಗೆ ಹಂಚಲಾರಂಭಿಸಿತು. ಮಕ್ಕಳು ಮೊದಲಿಗಿಂತಲೂ ದೈಹಿಕವಾಗಿ, ಮಾನಸಿಕವಾಗಿ ಚೆನ್ನಾಗಿ ಬೆಳೆಯಲಾರಂಭಿಸಿದರು. ಯಾವುದೇ ಆಹಾರ ನಾಲ್ಕು ತುತ್ತು ಹೆಚ್ಚು ತಿಂದಿದ್ದರೂ ಚೆನ್ನಾಗಿ ಬೆಳೆಯುತ್ತಿದ್ದರು ಎಂಬುದರ ಬದಲಿಗೆ ಗೋಧಿ ಸೇವಿಸಲಾರಂಭಿಸಿದ್ದು ಈ ಬದಲಾವಣೆ ಕಾರಣ ಎಂಬ ಇನ್ನೊಂದು ತಪ್ಪು ಕಲ್ಪನೆ ಜನರಲ್ಲಿ ಬೇರೂರಿತು.
ಅಭಿವೃದ್ಧಿ, ಆಧುನಿಕತೆ ಹಾಗೂ ಇಳುವರಿಯನ್ನೇ ಗುರಿಯಾಗಿಟ್ಟುಕೊಂಡ ಕೃಷಿ ಪದ್ಧತಿಗೂ ಸಿರಿಧಾನ್ಯಗಳು ಬಲಿಯಾದವು. ಪರಿಣಾಮ ಜನರು ಸಿರಿಧಾನ್ಯಗಳನ್ನು ಮರೆಯಲಾರಂಭಿಸಿದರು. ಇದರಿಂದ ಇವುಗಳನ್ನು ಬೆಳೆಯುತ್ತಿದ್ದ ರೈತರಿಗೂ ಹೊಡೆತ, ಜನರ ಆರೋಗ್ಯದ ಮೇಲೂ ಹೊಡೆತ
.
“ಜೀವನ ಶೈಲಿ ಚೆನ್ನಾಗಿದ್ದರೆ ಆರೋಗ್ಯವಿರುತ್ತದೆ. ಜೀವನಶೈಲಿಗೂ ನಮ್ಮ ಆಹಾರಾಭ್ಯಾಸಕ್ಕೂ ನಿಕಟ ಸಂಬಂಧ” ಎಂದು ಡಾ. ಶ್ರೀಕಂಠಯ್ಯನವರು ಜನರ ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳ ಮಹತ್ವ ತಿಳಿಸಿದರು. ಸಿರಿಧಾನ್ಯಗಳು ಕೇವಲ ಬರಗಾಲದ ಆಹಾರಮಾತ್ರವಲ್ಲ, ಆರೋಗ್ಯಕರ ಆಹಾರ ಪದ್ಧತಿ ಕೂಡ. ಗೋಧಿ, ಅಕ್ಕಿಗಿಂತ ನಾಲ್ಕು ಪಟ್ಟು ಇದರಲ್ಲಿ ಆಹಾರಾಂಶವಿದೆ. ಸಿರಿಧಾನ್ಯಗಳು ಅಧಿಕ ಅಮಿಲೋಸ್ ಅಂಶವನ್ನು ಹೊಂದಿದ್ದು, ನಾರಿನಂಶ (ಡಯಟರಿ ಫೈಬರ್) ಗಳ ಅತ್ಯುತ್ತಮ ಮೂಲಗಳಾಗಿವೆ. ಇವು ಸಕ್ಕರೆಯನ್ನು ನಿಧಾನವಾಗಿ ಹೀರಿಕೊಂಡು, ರಕ್ತದಲ್ಲಿ ಕರಾರುವಕ್ಕಾಗಿ ಬಿಡುಗಡೆ ಮಾಡುತ್ತವೆ. ಆಧುನಿಕ ಆಹಾರ ಪದ್ಧತಿಯ ಬಹುಮುಖ್ಯ ಅಡ್ಡಿಯೆಂದರೆ ನಾರಿನಂಶದ ಕೊರತೆ.
ಧಾನ್ಯ | ಅಕ್ಕಿ | ಗೋಧಿ | ರಾಗಿ | ನವಣೆ | ಸಾಮೆ | ಹಾರಕ | ಕೊರಲು | ಊದಲು |
ನಾರಿನಂಶ | 5.2% | 12.9% | 18.8% | 17.62% | 15.08% | 17.0% | 14.2% | 13.7% |
ಸಿರಿಧಾನ್ಯಗಳಲ್ಲಿರುವ ಖನಿಜಾಂಶಗಳು ಗಮನಾರ್ಹ. ಮಾತ್ರೆಗಳು ಭರ್ಜರಿಯಾಗಿ ಮಾರಾಟವಾಗುತ್ತಿರುವ ಇಂದಿನ ದಿನಗಳಲ್ಲಿ, ಆ ಸ್ಥಾನವನ್ನು ಸಿರಿಧಾನ್ಯಗಳು ಸಮರ್ಥವಾಗಿ ತುಂಬುತ್ತವೆ.
ಧಾನ್ಯ | ಅಕ್ಕಿ | ಗೋಧಿ | ರಾಗಿ | ನವಣೆ | ಸಾಮೆ | ಸಜ್ಜೆ | ಊದಲು |
ಕ್ಯಾಲ್ಸಿಯಂ (ಮಿಲಿಗ್ರಾಂ/100 ಗ್ರಾಂಗೆ) | 10 | 41 | 344 | 31 | 17 | 42 | 11 |
ಕಬ್ಬಿಣ (ಮಿಲಿಗ್ರಾಂ/100 ಗ್ರಾಂಗೆ) | 0.7 | 5.3 | 3.9 | 2.8 | 9.3 | 8.0 | 15.2 |
ರೋಗಗಳನ್ನು ನಿಯಂತ್ರಿಸುವ ಫಿನೋಲಿಕ್ ಆಸಿಡ್, ಪ್ಲೆವನೋಯ್ಡ್ಸ್ ಹಾಗೂ ಫೈಟೋಆಲೆಕ್ಸಿನ್ನಂಥ ಫೈಟೋನ್ಯೂಟ್ರಿಯಂಟ್ಸ್ಗಳನ್ನು ಸಿರಿಧಾನ್ಯಗಳು ಹೊಂದಿವೆ. ಇವು ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್ಗಳು. ಸಿರಿಧಾನ್ಯಗಳು ಕೇವಲ ಕಾರ್ಬೋಹೈಡ್ರೇಟ್ ಮಾತ್ರವಲ್ಲ, ಉತ್ತಮ ಗುಣಮಟ್ಟದ ಕೊಬ್ಬನ್ನು ಕೂಡ ಪೂರೈಸುತ್ತದೆ. ಉದಾಹರಣೆಗೆ ಸಜ್ಜೆಯಲ್ಲಿರುವ ಕೊಬ್ಬಿನಲ್ಲಿ ಶೇಕಡಾ 2.3ರಿಂದ ಶೇಕಡಾ 5.8ರಷ್ಟು ಒಮೆಗಾ-3 ಕೊಬ್ಬಿನಾಮ್ಲ ಇರುತ್ತದೆ.
“ತುಮಕೂರು, ಅನಂತಪುರ ಜಿಲ್ಲೆಯಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ, ಸಿರಿಧಾನ್ಯಗಳಲ್ಲೊಂದಾದ ಕೊರಲೆ ಈಗ ಕಣ್ಮರೆಯಾಗುತ್ತಿರುವ ಬೆಳೆ”, ಮಲ್ಲಿಕಾರ್ಜುನ ಹೊಸಪಾಳ್ಯರು ಕೊರಲೆಯ ಪರಿಚಯ ಮಾಡಿಸಿದರು. ಆಧುನಿಕ ಕೃಷಿಯ ಸುಳಿಗಾಳಿಗೆ ಸಿಲುಕಿ ನಲುಗುತ್ತಿರುವ "ಕೊರಲೆ"ಯ ಬಗ್ಗೆ ಮಾಹಿತಿ ಕಲೆಹಾಕಿ, “ಕಣ್ಮರೆಯ ಹಾದಿಯಲ್ಲಿ ಕೊರಲೆ” ಪುಸ್ತಕದಲ್ಲಿ ಇವರು ದಾಖಲಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಈ ಪುಸ್ತಕವನ್ನು ಡಾ. ಶ್ರೀಕಂಠಯ್ಯ ಅನಾವರಣಗೊಳಿಸಿದರು. ಸಿರಿಧಾನ್ಯಗಳ ಬೀಜದ ಬಗ್ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದವರ ವಿಳಾಸವೂ ಪುಸ್ತಕದಲ್ಲಿದೆ. ಬೆಂಗಳೂರಿನ ಸಹಜ ಸಮೃದ್ಧ, ತುಮಕೂರಿನ ಧಾನ್ಯ ಸಂಸ್ಥೆ, AICSMIP ಜಂಟಿ ಪ್ರಕಾಶನದಲ್ಲಿ ಹೊರಬಂದ ಈ ಪುಸ್ತಕದ ಬೆಲೆ 10 ರೂಪಾಯಿಗಳು.

ಕಾರ್ಯಕ್ರಮದ ಅಂತ್ಯದಲ್ಲಿ ರೈತರಿಗೆಂದೇ ಪ್ರಶ್ನೋತ್ತರ ಕಾರ್ಯಕ್ರಮವಿತ್ತು. ಇದರಲ್ಲಿ ಗಮನ ಸೆಳೆದ ಒಂದು ಪ್ರಶ್ನೆ, “ರೈತ ಜನರ ಅವಶ್ಯಕತೆ ನೋಡಿ ಬೆಳೆಯಬೇಕೆ ಅಥವಾ ತನ್ನ ಅವಶ್ಯಕತೆ ನೋಡಿಯೇ ಎಂದು. ಏಕೆಂದರೆ ಸಿರಿಧಾನ್ಯಗಳನ್ನು ಜನರ ಆರೋಗ್ಯದ ಹಿತ ದೃಷ್ಟಿಯಿಂದ ಬೆಳೆಯಿಸಿದರೂ ಕೊನೆಯಲ್ಲಿ ರೈತರಿಗೆ ಅದು ಲಾಭದಾಯಕವೇ?” ಎಂಬುದು. ಅದಕ್ಕೆ ಉತ್ತರಿಸಿದ ಇನ್ನೊಬ್ಬ ರೈತ ಮಿತ್ರರು, “ಸಿರಿಧಾನ್ಯದ ಮಹತ್ವ ಜನರಿಗಿನ್ನೂ ಪರಿಚಯವಾಗುವ ಹಂತದಲ್ಲಿದೆ. ಮೊದಲಿಗೆ ನಿಮ್ಮ ಮನೆಗೆ ಬೇಕಾದಷ್ಟು ಬೆಳೆಯಿರಿ. ಸ್ವಲ್ಪ ನಿಮ್ಮ ಸುತ್ತಮುತ್ತಲಿನವರಿಗೆ ಪರಿಚಯಿಸಿ. ನಿಧಾನವಾಗಿ ಜನರಿಗೆ ಪರಿಚಯವಾಗುತ್ತದೆ. ನಂತರ ಬೇಡಿಕೆ ಬರುತ್ತದೆ” ಎಂದರು.